ಸಂಭ್ರಮದೊಂದಿಗೆ ಮಹಿಳೆಯರಿಂದ ಕುಂಭ ಮೆರವಣಿಗೆ

ಸಂಭ್ರಮದೊಂದಿಗೆ ಮಹಿಳೆಯರಿಂದ ಕುಂಭ ಮೆರವಣಿಗೆ  Women take part in Kumbh procession with enthusiasm

ಲಕ್ಷ್ಮೇಶ್ವರ 23: ಪಟ್ಟಣದ ಬಸ್ತಿಬಣದ ನೆಲಗಾರಪೇಟೆಯಲ್ಲಿ ಜೀರ್ಣೋದ್ಧಾರಗೊಂಡ ಸಾಲೇಶ್ವರ ದೇವಸ್ಥಾನ ಲೋಕಾರೆ​‍್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿಸಂಭ್ರಮದೊಂದಿಗೆ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಯಿತು.

ಕುಂಭ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದ್ದರು. ಜೀರ್ಣೋದ್ಧಾರಗೊಂಡ ಸಾಲೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಸಾಗಿ ಸೋಮೇಶ್ವರ ದೇವಸ್ಥಾನ ತಲುಪಿ ಸೋಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ಮರಳಿ ಸಾಲೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಪಲ್ಲಕ್ಕಿ ಈಶ್ವರ ಬಸವಣ್ಣ ಭಾವಚಿತ್ರದ ಮೆರವಣಿಗೆ ನಡೆಯಿತು. ಶ್ರೀ ಚನ್ನವೀರ ಮಹಾಸ್ವಾಮಿಗಳ ಹೂವಿನಶಿಗ್ಲಿ ವಿರಕ್ತಮಠ ಶ್ರೀ ಮಳೆ ಮಲ್ಲಿಕಾರ್ಜುನ ಸ್ವಾಮಿಗಳ ಕರೇವಾಡಿಮಠ ಪೂಜ್ಯರ ನೇತೃತ್ವದಲ್ಲಿ ಜೀರ್ಣೋದ್ಧಾರ ಗೊಂಡ ಸಾಲೇಶ್ವರ ದೇವಸ್ಥಾನದಲ್ಲಿ ಈಶ್ವರ ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಶೇಷ ಅಭಿಷೇಕ ಪೂಜೆಗಳೊಂದಿಗೆ ಲೋಕಾರೆ​‍್ಣಗೊಳಲಿದ್ದು ನಂತರ ವೇದಿಕೆ ಕಾರ್ಯಕ್ರಮ ಜರಗುವುದು. 

ಕುಂಭ ಮೆರವಣಿಗೆಯಲ್ಲಿ ಕಮಿಟಿಯ ಅಧ್ಯಕ್ಷರು ಸರ್ವ ಸದಸ್ಯರು ಮುಖಂಡರು ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು