ರಾಣಿಬೆನ್ನೂರ 2: ನಗರದ ಸರಕಾರಿ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಎನ್ ಆರ್ ಹಲಗೇರಿ ಅವರ ನಿವೃತ್ತಿ ಕಾರ್ಯಕ್ರಮದ ಅಂಗವಾಗಿ ಕಛೇರಿಯ ಸಿಬ್ಬಂದಿಯವರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿ ಅವರು ಮಾತನಾಡಿದರು.
ರೈತಾಪಿ ವರ್ಗದವರಿಗೆ ಹಾಗೂ ಜನಸಾಮಾನ್ಯರಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ನನಗಿದೆ. ತೋಟಗಾರಿಕೆ ಇಲಾಖೆಯಲ್ಲಿರವ ಸೌಲಭ್ಯಗಳನ್ನು ರೈತರು ಸದುಪಯೋಗಪಡೆದುಕೊಂಡು ಆರ್ಥಿಕ ಸ್ವಾಲಂಬಿಗಳಾಗಿ ಬಾಳಿ ಬದುಕಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಇಲಾಖೆಯ ಹಿರಿಯ ಅಧಿಕಾರಿಗಳಾದ ವಿಜಯಲಕ್ಷ್ಮಿ, ರಂಗಪ್ಲ, ರಾಜೇಂದ್ರ, ಶಂಕರ್ಪ ಆರಿಕಟ್ಟಿ, ಜಗದೀಶ್ ಹುಲಗೂರ, ಪರಶುರಾಮ ಮೆಳವಂಕಿ, ದತ್ತಾತ್ರೇಯ ಭೂತೆ, ರಜಿಯಾ, ನಿಂಗಪ್ಪ ಐಗಳ, ಹೊನ್ನಪ್ಪ, ಬಸನಗೌಡ, ಭುವನೇಶ್ವರ್, ಶಿವರಾಜ, ಮಲ್ಲಿಕಾರ್ಜುನ, ದೇವರಗಡ್ಡಿ, ದುರಗಪ್ಪ ಸೇರಿದಂತೆ ಮತ್ತಿತರರು ಇದ್ದರು.