ಉಗಾರ-ಕುಡಚಿ ಮಾರ್ಗದ ವಾಹನ ಸಂಚಾರ ಸ್ಥಗಿತ
ಲೋಕದರ್ಶನ ವರದಿ
ಕಾಗವಾಡ: ಕೃಷ್ಣಾ ನದಿ ನೀರಿನ ರಭಸಕ್ಕೆ ಉಗಾರ-ಕುಡಚಿ ಮಧ್ಯದ ಕೃಷ್ಣಾ ನದಿ ಮೇಲಿನ ಸೇತುವೆಯ ಎರಡು ದಡಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಸೇತುವೆ ಮೇಲಿನ ನೀರು ಇಳಿಮುಖವಾದರೂ ಸಂಚಾರ ಸೇವೆ ಕಡಿತಗೊಳಿಸಲಾಗಿದೆ.
ಕಳೇದ 20 ದಿನಗಳಿಂದ ಕುಡಚಿ ಸೇತುವೆ ನೀರಿನಲ್ಲಿ ಮುಳುಗಿದೆ. ಸುಮಾರು 10 ಅಡಿ ನೀರು ಸೇತುವೆ ಮೇಲಿಂದ ಹರಿದು ಹೋಗಿದ್ದರಿಂದ ಎರಡು ದಡಿಗಳ ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸೇತುವೆ ಮೇಲಿಂದ ಸಂಚಾರಿಸಲು ವಾಹನಧಾರಕರಿಗೆ ಅಪಾಯಕಾರಿವಾಗಿದೆ. ಇದರಿಂದ ಸಂಚಾರ ಸೇವೆ ಕಡಿತಗೊಳಿಸಲಾಗಿದೆ.
ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ, ಕುಡಚಿ ಪಿಎಸ್ಐ ಮತ್ತು ಸಿಬ್ಬಂದಿಗಳು ಸೇತುವೆ ಮೇಲೆ ಉಳಿದು ಭಾರೀ ತೂಕದ ವಾಹನಗಳು ಸೇತುವೆ ಮೇಲಿಂದ ಸಂಚಾರಿಸಲು ನಿಷೆೇಧಿಸಲಾಗಿದೆ.
ಕೆಲ ಬೈಕ್ಗಳು ಮಾತ್ರ ಸಂಚಾರಿಸುತ್ತಿವೆ. ಕಳೇದ 20 ದಿನಗಳ ನಂತರವು ಈ ಮಾರ್ಗದ ಸೇತುವೆಯಿಂದ ಸಂಚಾರಿಸಲು ವಾಹನಧಾರಕರಿಗೆ ಅನಾನುಕೂಲತೆಯಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 