ಕಮಲಹಾಸನ್ ಗೆ ನಾಳೆ ಚೆನ್ನೈ ನಲ್ಲಿ ಶಸ್ತ್ರಚಿಕಿತ್ಸೆ
ಚೆನ್ನೈ, 21 ಬಹುಭಾಷಾ ನಟ, ತಮಿಳುನಾಡಿನ ಮಕ್ಕಲ್ ನೀದಿ ಮಯ್ಯಂ ಪಕ್ಷ - ಎಂ ಎನ್ ಎಂ ಪಿ ಅಧ್ಯಕ್ಷ ಕಮಲ ಹಾಸನ್ ಅವರು ನಾಳೆ ಆಸ್ಪತ್ರೆಗೆ ದಾಖಲಾಗಲಿದ್ದಾರೆ.
ಅವರ ಕಾಲಿಗೆ ಅಳವಡಿಸಲಾಗಿರುವ ಇಂಪ್ಲಾಂಟ್ ತೆಗೆಯಲು ವೈದ್ಯರು ಶುಕ್ರವಾರ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಿದ್ದಾರೆ. 2016 ರ ರಸ್ತೆ ಅಪಘಾತದಲ್ಲಿ ಕಮಲ ಹಾಸನ್ ಅವರು ಕಾಲು ಮುರಿಕೊಂಡಿದ್ದಾಗ ವೈದ್ಯರು ಇಂಪ್ಲಾಂಟ್ ಅಳವಡಿಸಿದ್ದರು. ಈಗ ಅದನ್ನು ತೆಗೆದುಹಾಕಬೇಕಾಗಿದೆ. ವೈದ್ಯರ ಸಲಹೆಯ ಮೇರೆಗೆ ಕಮಲ ಹಾಸನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂ ಎನ್ ಎಂ ಪಕ್ಷದ ಉಪಾಧ್ಯಕ್ಷ ಡಾ.ಆರ್ ಮಹೇಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕಮಲ್ ಹಾಸನ್ ನಾಳೆ (ನವೆಂಬರ್ 22) ಆಸ್ಪತ್ರೆಗೆ ದಾಖಲಾಗಲಿದ್ದು, ಚೇತರಿಸಿಕೊಳ್ಳಲು ಸ್ವಲ್ಪ ದಿನಗಳು ಅಗತ್ಯವಾಗಲಿದೆ ಎಂದು ಮಹೇಂದ್ರನ್ ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 