ನೆರವು ಪಡೆದು ಪರೀಕ್ಷೆ ಬರೆದ ವಿಶೇಷ ವಿದ್ಯಾರ್ಥಿಗಳು

ನೆರವು ಪಡೆದು ಪರೀಕ್ಷೆ ಬರೆದ ವಿಶೇಷ ವಿದ್ಯಾರ್ಥಿಗಳು  Special students who took the exam with assistance

ಲೋಕದರ್ಶನ ವರದಿ 

ಕಂಪ್ಲಿ 18: ಸಾಧನೆಗೆ ಅಂಗವಿಕಲತೆ ಶಾಪವಲ್ಲ,ಮಾನಸಿಕ ಸ್ಥೈರ್ಯವಿದ್ದರೆ,ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಕಂಪ್ಲಿ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಹಾಯಕರ ನೆರವಿನಿಂದ ಹತ್ತನೇ ತರಗತಿ ಪರೀಕ್ಷೆ ಬರೆದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ. 

2026-27ನೇ ಸಾಲಿನ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಒಟ್ಟೂ 12 ಜನ ವಿಶೇಷ ಚೇತನರು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಪ್ರಥಮ ದಿನವಾದ ಇಂದಿನ ಪರೀಕ್ಷೆಗೆ 10 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು,ಇದರಲ್ಲಿ 8 ಜನ ವಿದ್ಯಾರ್ಥಿಗಳು ಇಂದಿನ ಪ್ರಥಮ ದಿನ್ದ ಪರೀಕ್ಷೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿದ್ದು, ಇದರಲ್ಲಿ 3 ಜನ ವಿದ್ಯಾರ್ಥಿಗಳು ಸಹಾಯಕರ ನೆರವಿನಿಂದ ಪರೀಕ್ಷೆಯನ್ನು ಬರೆದರೆ, ಇನ್ನುಳಿದ 5 ವಿದ್ಯಾರ್ಥಿಗಳು ಸ್ವತಃ ಪರೀಕ್ಷೆಯನ್ನು ಬರೆದರು. 

ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೂರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ನಿರ್ಮಲ.ಕೆ.ಎನ್ನುವ ವಿದ್ಯಾರ್ಥಿ ಎನ್‌.ಕೆ.ಗಗನಶ್ರೀ ಸಹಾಯದೊಂದಿಗೆ, ಶ್ರೀನಿವಾಸ್ ಎನ್ನುವ ವಿದ್ಯಾರ್ಥಿ ಎಚ್‌.ಉಮಾ ಸಹಾತದೊಂದಿಗೆ, ತ್ರಿವೇಣಿ ರುದ್ರ​‍್ರಸಾದ ಎನ್ನುವ ವಿದ್ಯಾರ್ಥಿನಿ ಕೆ.ಕಾವೇರಿ ಎನ್ನುವ ವಿದ್ಯಾರ್ಥಿಯ ಸಹಾಯದೊಂದಿಗೆ ಪರೀಕ್ಷೆಯನ್ನು ಬರೆದಿದ್ದಾರೆಂದು ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕಿ ಸುಜಾತಾ ಜತ್ತರ್ ತಿಳಸಿದರು.