ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆ: 79ನೇ ಸ್ವಾತಂತ್ರ್ಯ ದಿನಾಚರಣೆ
Shree SS Vidya Institution: 79th Independence Day Celebration
ತಾಳಿಕೋಟಿ, 17 ; ಪಟ್ಟಣದ ಶ್ರೀ ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಧ್ವಜಾರೋಹಣ ನೇರವೇರಿಸಿ ಮತನಾಡಿ ನಮ್ಮ ಹಿರಿಯರು ತ್ಯಾಗ ಬಲಿದಾನಗಳಿಂದ ಕೊಟ್ಟು ಹೋದ ಈ ಸ್ವಾತಂತ್ರವನ್ನು ರಕ್ಷಿಸಿಕೊಂಡು ದೇಶದ ಪ್ರಗತಿಗಾಗಿ ನಾವೆಲ್ಲರೂ ಕೆಲಸ ಮಾಡುವ ಅಗತ್ಯವಿದೆ ಎಂದ ಅವರು ದೇಶದ ಬಹುದೊಡ್ಡ ಶಕ್ತಿ ವಿದ್ಯಾರ್ಥಿ ಯುವ ಸಮುದಾಯವಾಗಿದೆ ಇದು ದೇಶದ ಭವಿಷ್ಯವಾಗಿದೆ ಯುವಕರು ಮೊಬೈಲ್ ಗೀಳಿನಿಂದ ಹೊರಬಂದು ಶ್ರೇಷ್ಠ ಗುರಿಯೊಂದಿಗೆ ಕೆಲಸ ಮಾಡುವ ಅಗತ್ಯ ಇದೆ ಎಂದರು. ಉಪನ್ಯಾಸಕರಾದ ಎಮ್.ಬಿ.ವಾಲೀಕಾರ ಅವರು ಮನೆ-ಮನೆಯಲ್ಲಿ ದೇಶಕಾಯುವ ಯೋದರಾಗಬೇಕು ಎಂದು ಹೇಳಿದರು.
ಎಸ್.ವಿ.ಜಾಮಗೊಂಡಿ ಯವರು ಸ್ವಾತಂತ್ರ್ಯ ಹಿನ್ನೆಲೆಯನ್ನು ವಿವರಿಸಿದರು. ಧ್ವಜಾರೋಹಣ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಳಿಕೋಟಿ ಕೆನರಾ ಬ್ಯಾಂಕಿನ ಕಿರಿಯ ವ್ಯವಸ್ಥಾಪಕರಾದ ಪ್ರಶಾಂತ ಕುಮಾರ ಹಾಗೂ ಗುರುರಾಜ. ಕಾಜಗಾರ. ಇವರು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಒಟ್ಟು ಆರು ಖಅ,ಖಖಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅನುಕೂಲವಾಗಲಿ ಅಂತಾ ಕೆನರಾ ವಿದ್ಯಾ ಜ್ಯೋತಿ ಯೋಜನೆಯಲ್ಲಿ ಪ್ರೌಢಶಾಲೆಯ 3 ವಿದ್ಯಾರ್ಥಿಗಳಿಗೆ ತಲಾ 5000 ಸಾವಿರ ಮತ್ತು ಪ್ರಾಥಮಿಕ ಶಾಲೆಯ 3 ವಿದ್ಯಾರ್ಥಿಗಳಿಗೆ ತಲಾ 2500 ಸಾವಿರ ತಾಳಿಕೋಟಿ ಕೆನರಾ ಬ್ಯಾಂಕಿನಿಂದ ಸಹಾಯ ಮಾಡಿದರು.
ಪ್ರಸಿದ್ಧ ವ್ಯಾಪಾರಸ್ಥರಾದ ದತ್ತಾ ಟೆಕ್ಸಟೈಲನ ಮಾಲೀಕರಾದ ಸಚಿನ.ಹಂಚಾಟೆ. ಬ್ರಹ್ಮ ಲಿಂಗೇಶ್ವರ ಪ್ರಾಥಮಿಕ ಶಾಲೆಯ 20 ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಲಾ 1500 ರೂಪಾಯಿಗಳನ್ನು ಕೊಡುವದಾಗಿ ಘೋಷಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ರವಿ.ಬ.ಪಾಟೀಲರು. ಪ್ರಾಚಾರ್ಯರುಗಳಾದ ಡಾ:ಎಚ್.ಬಿ. ನಡುವಿನಕೇರಿ, ಶಿವಕುಮಾರ. ನಾಯಕ. ವಿರೇಶ.ಕನಕ. ಜಿ.ಸಿ.ಪಾಟೀಲ. ಎಸ್.ಬಿ.ಮಂಗ್ಯಾಳ. ಸಿದ್ಧಾರ್ಥ. ಮುಖ್ಯೋಪಾಧ್ಯಾಯರಾದ ಅಶೋಕ. ಕಟ್ಟಿ. ಆಂಗ್ಲ ಮಾದ್ಯಮ ಗುರುಮಾತೆ ಮೀರಾ ದೇಶಪಾಂಡೆ. ಎಸ್ ಎಸ್.ವಿದ್ಯಾಸಂಸ್ಥೆಯ ಸಮಸ್ತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿರೂಪಣೆ ಶಿಕ್ಷಕ ಬಿ.ಆಯ್.ಹಿರೇಹೊಳಿ ನೇರವೇರಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 