ಕೋಚ್ ಹುದ್ದೆಯಲ್ಲಿ ರಮೇಶ್ ಪವಾರ್ ಮುಂದುವರೆಯೋದು ಅನುಮಾನ
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾತರ್ಿ ಮಿಥಾಲಿ ರಾಜ್ ಜೊತೆ ಕೊಚ್ ರಮೇಸ್ ಪವಾರ್ ಕಾದಾಟಕ್ಕಿಳಿದಿರುವ ಹಿನ್ನೆಲೆಯಲ್ಲಿ ತರಬೇತಿ ಅವಧಿಯನ್ನ ಬಿಸಿಸಿಐ ವಿಸ್ತರಿಸುವುದಿಲ್ಲ ಎಂದು ತಿಳಿದು ಬಂದಿದೆ.
ಇತ್ತಿಚೆಗೆ ಮುಕ್ತಾಯವಾದ ವಿಶ್ವ ಟಿ20 ವಿಶ್ವಕಪ್ ಮಹಿಳಾ ಟೂನರ್ಿಯ ಸೆಮಿಫೈನಲ್ ಪಂದ್ಯದಲ್ಲಿ ಆಂಗ್ಲರ ವಿರುದ್ಧದ ಪಂದ್ಯದಲ್ಲಿ ತಂಡದ ಅನುಭವಿ ಆಟಗಾತರ್ಿ ಮಿಥಾಲಿ ರಾಜ್ಗೆ ಅವಕಾಶ ಕೊಟ್ಟಿರಲಿಲ್ಲ. ಇದು ಭಾರಿ ವಿವಾದವನ್ನ ಸೃಷ್ಟಿಸಿತ್ತು.
ಸ್ವತಃ ಮಿಥಾಲಿ ರಾಜ್ ತಮ್ಮನ್ನ ಸೆಮಿಫೈನಲ್ ಪಂದ್ಯದಲ್ಲಿ ಆಡಿಸದಿರುವ ಕುರಿತು ಕೋಚ್ ರಮೇಶ್ ಪವಾರ್ ಮತ್ತು ತಂಡದ ಮಾಜಿ ಆಟಗಾತರ್ಿ ಡೈಯಾನಾ ಎಡುಲ್ಜಿ ವಿರುದ್ಧ ಹರಿಹಾಯ್ದಿದಿದ್ದರು.
ಇದಕ್ಕೆ ಕೋಚ್ ರಮೇಶ್ ಪವಾರ್, ಟೂನರ್ಿ ವೇಳೆ ಮಿಥಾಲಿ ಅವರ ವರ್ತನೆಯಿಂದ ಬೇಸರವಾಗಿತ್ತು. ಟೂನರ್ಿ ಆಡುವಾಗ ತಂಡದ ಪ್ಲಾನ್ ಪ್ರಕಾರ ಆಡುತ್ತಿರಲ್ಲಿಲ್ಲ. ತಂಡದಲ್ಲಿ ತಮ್ಮ ಪಾತ್ರವನ್ನ ಮರೆತು ತಮ್ಮ ದಾಖಲೆಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದರು. ಅಭ್ಯಾಸ ಪಂದ್ಯದ ವೇಳೆ ಮಿಥಾಲಿ ರನ್ ಗಳಿಸಲು ಪರದಾಡುತ್ತಿದ್ದರು. ಟೂನರ್ಿ ಆಡುವ ವೇಳೆ ತನಗೆ ಆರಂಭಿಕ ಬ್ಯಾಟ್ಸ್ಮನ್ನ್ನಾಗಿ ಕಳುಹಿಸದಿದ್ದರೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ತವರಿಗೆ ತೆರೆಳುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಪವಾರ್ ಬಿಸಿಸಿಐಗೆ ತಿಳಿಸಿದ್ದರು.
ಕೋಚ್ ರಮೇಶ್ ಪವಾರ್ ಮಾತನ್ನ ಕೇಳದ ಬಿಸಿಸಿಐ ರಮೇಶ್ ಪವಾರ್ ವಿರುದ್ಧವೇ ತಿರುಗಿ ಬಿದ್ದಿದ್ದು ಕೋಚ್ ಹುದ್ದೆಯಲ್ಲಿ ಮುಂದುವರಿಸಬಾರದೆಂದು ಬಿಸಿಸಿಐ ನಿಧರ್ಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 