ಪ್ರೀತ್ಸೆ.. ಪ್ರೀತ್ಸೆ.. ಯುವಕನ ಕಿರುಕುಳ: ಯುವತಿ ರಿಚೆಲ್ ಆತ್ಮಹತ್ಯೆಗೆ ಶರಣು
Preetha.. Preetha.. Harassment by a young man: Young woman Richelle commits suicide
ಕಾರವಾರ 11: ತಾಲೂಕು ಕದ್ರಾದಲ್ಲಿ ಯುವತಿ ರಿಚೆಲ್ (21) ನೇಣಿಗೆ ಶರಣಾಗಿದ್ದಾಳೆ. ಈಕೆ ಬೆಂಗಳೂರುನಲ್ಲಿ ಓದುತ್ತಿದ್ದು, ಈಕೆಗೆ ಪ್ರೀತಿಸು ಎಂದು ಕಾರವಾರದ ಯುವಕ ಸತಾಯಿಸುತ್ತಿದ್ದ ಎಂದು ರಿಚೇಲ್ ತಂದೆ ಕಿಸ್ತೋರ್ ಫ್ರಾನ್ಸಿಸ್ ಡಿಸೋಜಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ರಿಚೇಲ್ ಶುಕ್ರವಾರ ಮಧ್ಯಾಹ್ನ 2-30 ಕ್ಕೆ ಕದ್ರಾದಲ್ಲಿನ ತನ್ನ ಮನೆಯ ಬೆಡ್ ರೂಂನಲ್ಲಿ ಸೀರೆಯನ್ನು ಫ್ಯಾನ್ ಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯನ್ನು ಸತಾಯಿಸುತ್ತಿದ್ದ ಯುವಕ ಕಾರವಾರ ನಂದನಗದ್ದಾ ನಿವಾಸಿ. ಈತ ಬೆಂಗಳೂರಲ್ಲಿ ಓದುತ್ತಿದ್ದು, ರಿಚೆಲ್ ಳ ಪರಿಚಯ, ಸ್ನೇಹ ಇತ್ತು. ಚಿರಾಗ್ ಸಿ. ಕೋಠಾರಕರ್ ಎಂಬ ಯುವಕ ಮಗಳು ರಿಚೇಲ್ ಜೊತೆ ಪೋನ್ ಸಂಪರ್ಕದಲ್ಲಿ ಇದ್ದ. ಅವನ ಪ್ರೀತಿ ನಿರಾಕರಿಸಿದ್ದಕ್ಕೆ ನೀನು ಬದುಕಿದ್ದು ಪ್ರಯೋಜನ ಇಲ್ಲ, ಹೇಗಾದರೂ ಸತ್ತು ಹೋಗು, ಸತ್ತರೆ ಒಳ್ಳೆಯದು ಎಂದು ಅನ್ನುತ್ತಿದ್ದ ಎಂಬ ವಿಷಯವನ್ನು ಮಗಳು ನನಗೆ ಹೇಳಿದ್ದಳು. ಮಗಳ ಆತ್ಮಹತ್ಯೆ ಗೆ ಚಿರಾಗನ ಮಾತುಗಳ ಪ್ರೇರಣೆಯೇ ಕಾರಣ ಎಂದು ಕಿಸ್ತೋರ್ ಫ್ರಾನ್ಸಿಸ್ ಡಿಸೋಜಾ ದೂರಲ್ಲಿ ವಿವರಿಸಿದ್ದಾರೆ. ಕದ್ರಾ ಪೊಲೀಸರು ಸೆಕ್ಷನ್ 108 ಬಿಎಸ್ ಎನ್ ,-2023 ಅಡಿ ಪ್ರಕರಣ ದಾಖಲಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 