ಮೋದಿಗೆ ಪಾಕ್ ಬಗ್ಗೆ ತಂತ್ರಗಾರಿಕೆ ಇಲ್ಲ: ರಾಹುಲ್
ಹೊಸದಿಲ್ಲಿ 24: 'ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನದ ವಿಷಯದಲ್ಲಿ ಆಳವಾದ ಆಲೋಚನೆಯ ತಂತ್ರಗಾರಿಕೆಯನ್ನು ಅನುಸರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಆರೋಪಿಸಿದ್ದಾರೆ.
ಒಂದು ದಿನದ ಹಿಂದಷ್ಟೆ ರಾಹುಲ್ ಗಾಂಧಿ, "ಬಿಜೆಪಿ ಮತ್ತು ಆರ್ಎಸ್ಎಸ್ ಭಾರತದಲ್ಲಿ ದ್ವೇಷ ಹರಡುತ್ತಿವೆ' ಎಂದು ಆರೋಪಿಸುವ ಮೂಲಕ ವಿವಾದವೆಬ್ಬಿಸಿದ್ದರು.
ಲಂಡನ್ನ 'ಅಂತಾರಾಷ್ಟ್ರೀಯ ವ್ಯೂಹಗಾರಿಕೆ ಅಧ್ಯಯನ ಕೇಂದ್ರ ದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕ್ ವಿಷಯದಲ್ಲಿ ಯಾವುದೇ ಕ್ರಮಬದ್ಧ ತಂತ್ರಗಾರಿಕೆ ಇದ್ದಂತೆ ಕಾಣುವುದಿಲ್ಲ. ಪಾಕಿಸ್ಥಾನದ ಜತೆಗೆ ವ್ಯವಹರಿಸುವುದು ತುಂಬ ಕಷ್ಟ, ಏಕೆಂದರೆ ಅಲ್ಲಿ ಯಾವುದೇ ಒಂದು ಸಮ್ಮಿಳಿತ ಅಧಿಕಾರ ಪಾರಮ್ಯದ ಕೇಂದ್ರ ಎಂಬುದಿಲ್ಲ. ಆದುದರಿಂದ ಪಾಕಿಸ್ಥಾನದವರು ತಾವೇ ಅಂತಹ ಸಮ್ಮಿಳಿತ ಪರಮೋಚ್ಚ ಸಂರಚನೆಯನ್ನು ರೂಪಿಸಿಕೊಂಡು ಮುಂದೆ ಬರುವುದನ್ನು ನಾವು ಕಾಯಬೇಕಾಗುತ್ತದೆ' ಎಂದು ಹೇಳಿದರು.
ಭಾರತ - ಚೀನ ಸೇನೆಯ ನಡುವಿನ ಸುದೀರ್ಘ ಮುಖಾಮುಖೀಗೆ ಕಾರಣವಾದ ಡೋಕ್ಲಾಂ ವಿಷಯವನ್ನು ಕೂಡ ಕೇಂದ್ರ ಸರಿಯಾಗಿ ನಿರ್ವಹಿಸಿಲ್ಲ ಎಂದು ರಾಹುಲ್ ಮೋದಿ ಸರಕಾರವನ್ನು ಟೀಕಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 