ದಿ.11ರಿಂದ 18ರವರೆಗೆ ಸಚಿವ ಜಾರಕಿಹೊಳಿ ಪ್ರವಾಸ
ಗೋಕಾಕ: ಪೌರಾಡಳಿತ ಹಾಗೂ ಬಂದು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ರಮೇಶ ಜಾರಕಿಹೊಳಿ ಅವರು ಜಿಲ್ಲೆಯಲ್ಲಿ ದಿ.11ರಿಂದ 18ರವರೆಗೆ ಪ್ರವಾಸ ಕೈಕೊಳ್ಳಲಿದ್ದು ಅದರ ವಿವರ.
ದಿ. 11 ಮತ್ತು 12ರಂದು ಗೋಕಾಕದಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ. ಮತ್ತು ಸಾರ್ವಜನಿಕರ ಭೇಟಿ ಮಾಡಿ ಇಲ್ಲಿಯೇ ವಾಸ್ತವ್ಯ ಮಾಡುವರು.
ದಿ. 13ರಂದು ಮುಂಜಾನೆ ಗೋಕಾಕದಿಂದ ಹೊರಟು 10-30ಕ್ಕೆ ಅಥಣಿಯಲ್ಲಿ ಡಾ. ಬಿ.ಆರ್.ಅಂಬೇಡಕರ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ರಡರಟ್ಟಿ, ಸತ್ತಿ, ತೇಲಸಂಗ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಂದ ಗೋಕಾಕಕ್ಕೆ ಹಿಂತಿರುಗಿ ವಾಸ್ತವ್ಯ.
ದಿ. 14ರಂದು ಗೋಕಾಕದಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ. ಮತ್ತು ಸಾರ್ವಜನಿಕರ ಭೇಟಿ ಮಾಡಿ ಇಲ್ಲಿಯೇ ವಾಸ್ತವ್ಯ ಮಾಡುವರು.
ದಿ. 15ರಂದು ಗೋಕಾಕದಿಂದ ಹೊರಟು ಬೆಳಗಾವಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಗೋಕಾಕಕ್ಕೆ ಹಿಂತಿರುಗಿ ವಾಸ್ತವ್ಯ.
ದಿ. 16 ಮತ್ತು 17ರಂದು ಗೋಕಾಕದಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ. ಮತ್ತು ಸಾರ್ವಜನಿಕರ ಭೇಟಿ ಮಾಡಿ ಇಲ್ಲಿಯೇ ವಾಸ್ತವ್ಯ ಮಾಡುವರು.
ದಿ. 18ರಂದು 10 ಗಂಟೆಗೆ ಗೋಕಾಕದಿಂದ ಹೊರಟು 11-30 ಗಂಟೆಗೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಗೆ ಭೇಟಿಯಾಗುವರು. ನಂತರ ಗೋಕಾಕಕ್ಕೆ ಹಿಂತಿರುಗಿ ವಾಸ್ತವ್ಯ.
ದಿ. 19ರಂದು ಗೋಕಾಕದಿಂದ ಹೊರಟು 12-30ಕ್ಕೆ ವಿಜಾಪೂರದಲ್ಲಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಯಂಕಾಲ ಹುಬ್ಬಳ್ಳಿ ಆಗಮಿಸಿ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 