ಜೀವ ಉಳಿಸುವ ರಕ್ತದಾನ ಅಮೂಲ್ಯ: ಪಾಟೀಲ
ರಾಯಬಾಗ: ಎಲ್ಲ ದಾನಗಳಲ್ಲಿ ಒಂದು ಜೀವ ಉಳಿಸುವ ಅಮೂಲ್ಯವಾದ ದಾನ ಅದು ರಕ್ತದಾನ. ರಕ್ತದಾನ ಮಾಡುವುದರಿಂದ ಪ್ರಾಣಾಪಾಯದಲ್ಲಿರುವ ಓರ್ವ ಮನುಷ್ಯನ ಜೀವ ಉಳಿಸಿದಂತಾಗುತ್ತದೆ ಎಂದು ಜಿ.ಪಂ.ಸದಸ್ಯ ಪ್ರಣಯ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಸ್ಟೇಶನ್ ಹಿಲ್ಲ್ದಲ್ಲಿರುವ ಅಭಾಜಿ ಸಭಾ ಭವನದಲ್ಲಿ ಜನಮಾನ್ಯ ದಿ.ವ್ಹಿ.ಎಲ್.ಪಾಟೀಲ (ಅಭಾಜಿ) ಫೌಂಡೇಶನ್ ಹಾಗೂ ಮಿರಜದ ಸೇವಾಸದನ ಲಾಯಿನ್ ಸುಪರ ಸ್ಪೆಶಾಲಿಟಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತ ನೀಡಿ ಮಾತನಾಡಿದ ಅವರು, ಯುವಕರು ಮುಂದೆ ಬಂದು ರಕ್ತದಾನ ಮಾಡುವದರ ಮೂಲಕ ಆದರ್ಶ ಮೆರೆಯಬೇಕೆಂದ ಅವರು ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ ಆರೋಗ್ಯವಂತರಾಗಿ ಸದಾ ಲವಲವಿಕೆಯಿಂದ ಇರಬೇಕೆಂದರು.
ರಾಯಬಾಗ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಉತ್ತಮಕುಮಾರ ಶಿಂಧೆ, ಮಹಾದೇವ ಕೋಕಾಟೆ, ಡಾ.ಅಜಿತ ನಾಯಿಕ, ಡಾ.ಸುರೇಶ ಬೆಳಗಾಂವಕರ, ಡಾ.ವಿನಾಯಕ ಕುಲಕಣರ್ಿ ಡಾವ್ಹಿ.ಎಸ್.ಬೋರೆ, ಡಾ. ಆನಂದ ತೋರೋ, ಡಾ.ಡಿ.ಆರ್.ಉಗ್ರಾಣಿ, ಡಾ.ಖನದಾಳೆ, ನ್ಯಾಯವಾದಿಗಳಾದ ಪಿ.ಎಂ.ಪಾಟೀಲ, ಸಿ.ಬಿ.ಬುಸಗುಂಡೆ, ಎಮ್.ಕೆ.ಖೊಂಬಾರೆ, ನಿಂಗಪ್ಪ ಪೂಜೇರಿ, ಶಿವಪುತ್ರ ಹಾಡಕಾರ ಸೇರಿದಂತೆ ಮುಂತಾದವರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 