ಕೋಟೆಕಲ್ ಜಾತ್ರೆ : ಅಗ್ನಿ ಪ್ರವೇಶೋಲ್ಲಂಘನ
ಲೋಕದರ್ಶನವರದಿ
ಗುಳೇದಗುಡ್ಡ09: ಧಾಮರ್ಿಕ ಆಚರಣೆಗಳಿಗೆ ಪ್ರಸಿದ್ದವಾಗಿರುವ ಈ ಭಾಗದ ಕೋಟೆಕಲ್ ಗ್ರಾಮದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ರಥೋತ್ಸವದ ಅಂಗವಾಗಿ ಶನಿವಾರ ಮಂಟಾ ಬಂಧುಗಳಿಂದ ಅಗ್ನಿ ಪ್ರವೇಶೋಂಲ್ಲಘನ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಕತರ್ೃ ಗದ್ದುಗೆಗೆ ರುದ್ರಾಭೀಷೇಕ ನಡೆಯಿತು. ಸಂಜೆ ಮಂಟಾ ಪರಿವಾರದವರಿಂದ ಅಗ್ಗಿ ಹಾಯುವ ಕಾರ್ಯಕ್ರಮಕ್ಕೆ ಪೂಜೆ ನಡೆಯಿತು. ಪಲ್ಲಕಿ ಹೊತ್ತು ಅಗ್ನಿ ಹಾಯುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ನೂರಾರು ಜನರು ಅಗ್ಗಿ ಹಾಯ್ದು ಹುಚ್ಚೇಶ್ವರ ದೇವರ ಆಶಿವರ್ಾದಕ್ಕೆ ಪಾತ್ರರಾದರು.
ಈ ಸಂದಭದಲ್ಲಿ ಮರಡಿಮಠದ ಕಾಡಸಿದ್ದೇಶ್ವರ ಶ್ರೀಗಳು, ಗಂಗಾವತಿಯ ಕಲ್ಮಠದ ಡಾ.ಕೊಟ್ಟೂರು ಶ್ರೀಗಳು, ಮುರುಘಾಮಠದ ಕಾಶಿನಾಥ ಶ್ರೀಗಳು, ಹೊಳೆಹುಚ್ಚೇಶ್ವರ ಶ್ರೀಗಳು, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.
ಭುಜಂಗರಾವ ದೇಸಾಯಿ, ಹನಮಂತ ಮಾವಿನಮರದ, ಪ್ರಭು ಮಂಟಾಗೌಡ್ರ, ಕಾಶಪ್ಪ ಮಂಟಾಗೌಡ್ರ, ತಿಪ್ಪಾಗೌಡ್ರ, ವಿಜಯಕುಮಾರ ಬೇಟಗೇರಿಗೌಡ್ರ, ಶಿವಾನಂದ ಮಂಟಾ, ಬಸವರಾಜ ಮಂಟಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 