ಗ್ಯಾಸ ವಿತರಣೆ ಸರಿಪಡಿಸಲು ಕರವೇ ಒಕ್ಕೂಟ ಮನವಿ
Karave union appeals to fix gas distribution
ಘಟಪ್ರಭಾ 04: ಗೋಕಾಕ ಹಾಗೂ ಮೂಡಲಗಿ ತಾಲ್ಯೂಕಾದ್ಯಂತ ಕಳೆದ ಒಂದು ತಿಂಗಳಿನಿಂದ ಅಡುಗೆ ಅನಿಲ(ಗ್ಯಾಸ್) ಸಮಸ್ಯೆಯಾಗಿದ್ದು ಇದನ್ನು ಖಂಡಿಸಿ ಗ್ಯಾಸ್ ಏಜೆನ್ಸಿ ವಿರುದ್ಧ ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಘಟಪ್ರಭಾದ ಮೃತ್ಯಂಜಯ ವೃತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಕೆಂಪಣ್ಣ ಚೌಕಶಿ ಅಡುಗೆ ಅನಿಲ(ಗ್ಯಾಸ್) ಏಜೆನ್ಸಿ ತಾಲೂಕಾದ್ಯಂತ ವಿಪರೀತ ಸಮಸ್ಯೆಯಾಗಿದ್ದು ಗ್ರಾಮೀಣ ಭಾಗದ ಜನರಿಗೆ, ಹೋಟೆಲ್ ಗ್ರಾಹಕರಿಗೆ, ದಿನ ಸಂಚರಿಸುವ ಆಟೋ ಚಾಲಕರಿಗೆ, ಹಾಗೂ ಸಣ್ಣ ಪುಟ್ಟ ಬೀದಿ ವ್ಯಾಪಾರಸ್ಥರಿಗೆ, ತುಂಬಾ ತೊಂದರೆ ಆಗುತ್ತಿದ್ದು. ಇದಲ್ಲದೇ ಕೆಲ ಗ್ಯಾಸ್ ವಿತರಕರು ನಿಗದಿತ ಬೆಲೆಗಿಂತ ಜಾಸ್ತಿ ಹಣ ಪಡೆಯುತ್ತಿದ್ದು.
ಜಾಸ್ತಿ ಹಣ ಪಡೆಯುವರ ಏಜೆನ್ಸಿ ರದ್ದುಗೊಳಿಸಬೇಕು, ಹಾಗೂ ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಆಗ್ರಹ ಪಡಿಸಿದ್ದರು. ಪ್ರಧಾನ ಕಾರ್ಯದರ್ಶಿ ರೆಹಮಾನ್ ಮುಖಾಶಿ ಮಾತನಾಡಿ ಆರು ದಿನಗಳ ಒಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ,ಉಸ್ತುವಾರಿ ಅಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕಾರ್ಯಾಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ,ಮಂಜುನಾಥ್ ಜೆಲ್ಲಿ, ಸಂಚಾಲಕ ರವಿ ನಾವಿ, ತಮ್ಮಣ್ಣಾ ಅರಭಾಂವಿ, ಲಕ್ಷ್ಮಿ ಹಾದಿಮನಿ, ಶಶಿ ಚೌಕಶಿ,ರಾಘವೇಂದ್ರ ಕುಡ್ಡೆಮ್ಮೆ, ಸಿದ್ದಪ್ಪ ಬನ್ನೆನ್ನವರ್, ಯಮನೂರ ದಳವಾರ್, ನಾಗರಾಜ ನಾಯಕ, ಆನಂದ ಗಾಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 