ಲಕ್ಷ್ಮೀದೇವಿ ದೇವಸ್ಥಾನದ ನೂತನ ಮಹಾದ್ವಾರದ ಉದ್ಘಾಟನೆ
Inauguration of new Mahadwara of Lakshmidevi Temple
ರಾಯಬಾಗ 02: ಒಳ್ಳೆಯ ಕೆಲಸ ಅಷ್ಟೇ ಮಾಡಿ, ಫಲಾಫೇಕ್ಷೆಯನ್ನು ಆ ಭಗವಂತನಿಗೆ ಬಿಟ್ಟುಬಿಡಬೇಕು, ಆಗ ಮಾತ್ರ ಜೀವನದಲ್ಲಿ ಸುಖ ಶಾಂತಿಯನ್ನು ಪಡೆಯಲು ಸಾಧ್ಯವೇಂದು ಕವಲಗುಡ್ಡ (ಹನುಮಾಪೂರ) ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಗುರುವಾರ ಸಾಯಂಕಾಲ ರಾಯಬಾಗ ರೈಲ್ವೇ ಸ್ಟೇಷನ್ದ (ಖೈರವಾಡಿ) ಲಕ್ಷ್ಮೀದೇವಿ ದೇವಸ್ಥಾನದ ನೂತನ ಮಹಾದ್ವಾರದ ವಾಸ್ತು ಪೂಜಾ ಹಾಗೂ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮೊಬೈಲ್, ಟಿವ್ಹಿಗಳು ಬಂದಾಗಿನಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿವೆ. ಇದರಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗಿ, ಸಮಾಜದಲ್ಲಿ ಕುಟುಂಬದಲ್ಲಿ, ಸಮಾಜದಲ್ಲಿ ಅಶಾಂತಿ ಹೆಚ್ಚಿದೆ. ಎಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ ಅಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ. ಅಲ್ಲಿ ಸದಾ ಲಕ್ಷ್ಮೀ ನೆಲೆಸಿರುತ್ತಾಳೆ. ದೇವರಲ್ಲಿ ಶುದ್ಧ ಶ್ರದ್ಧಾಭಕ್ತಿ, ಭಾವಗಳಿಂದ ನಡೆದುಕೊಳ್ಳಬೇಕು ಎಂದರು.
ವಕೀಲ ಆರ್.ಎಚ್.ಗೊಂಡೆ, ಮರೇಪ್ಪ ದಿಪಾಳೆ, ಗುಣಪಾಲ ಬಡೋರೆ, ಸಂಜು ಬಾವಚೆ, ರಮೇಶ ಕುಂಬಾರ, ಅಣ್ಣಪ್ಪ ಹೊಸಕೋಟೆ, ಸಂತೋಷ ತೆರದಾಳೆ, ತಾನಾಜಿ ದಿಪಾಳೆ, ಮಹಾವೀರ ಶೆಟ್ಟಿ, ಸಂತೋಷ ಶೆಟ್ಟಿ, ಬೀರ್ಪ ಗೊಂಡೆ, ಹಾಲಪ್ಪ ಅಳಗವಾಡಿ, ಕುಮಾರ ಹೊಸಕೋಟೆ, ಬೀರಾ ಗೆನಾನಿ, ಅಣ್ಣಪ್ಪ ಮುಧೋಳೆ, ಕಲ್ಲಪ್ಪ ನಾಗರಾಳೆ ಸೇರಿ ಅನೇಕ ಭಕ್ತಾದಿಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 