ಡಾ. ವೈ. ಎಂ. ಭಜಂತ್ರಿಯವರಿಗೆ ಸನ್ಮಾನ

ಡಾ. ವೈ. ಎಂ. ಭಜಂತ್ರಿಯವರಿಗೆ ಸನ್ಮಾನ Felicitation to Dr. Y. M. Bhajantri

ಲೋಕದರ್ಶನ ವರದಿ 

ಧಾರವಾಡ 16: ಜೆ.ಎಸ್‌.ಎಸ್ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದಲ್ಲಿ ಕನ್ನಡ ವಿಷಯದ ಪಿ. ಎಚ್ .ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಡಾ. ವೈ. ಎಂ. ಭಜಂತ್ರಿ ಅವರನ್ನು ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಿದರು.  

ಡಾ. ಬಿ. ಎನ್‌. ಭಾವಿ, ಕೇಂದ್ರದ ಸಂಯೋಜನಾಧಿಕಾರಿ ಡಾ. ಜಿನದತ್ತ ಅ.ಹಡಗಲಿ, ಮಹಾವೀರ ಉಪಾಧ್ಯೆ, ಡಾ. ಜಿನ್ನಪ್ಪ ಕುಂದಗೋಳ ಉಪಸ್ಥಿತರಿದ್ದರು.