ಮುಧೋಳದ ಖ್ಯಾತ ವೈದ್ಯ ಡಾ. ನಾಯಿಕ ಅವರಿಗೆ ಸನ್ಮಾನ
ಲೋಕದರ್ಶನವರದಿ
ಮುಧೋಳ-ನಗರದ ಖ್ಯಾತ ಹೃದಯ ರೋಗ ತಜ್ಞ ವೈದ್ಯ ಐ.ಎಂ.ಎ. ಮಾಜಿ ಅಧ್ಯಕ್ಷ ಡಾ.ವ್ಹಿ.ಎನ್.ನಾಯಿಕ ಅವರು ವೈದ್ಯಕೀಯ ರಂಗದಲ್ಲಿ ಸಲ್ಲಿಸುತ್ತಿರುವ ಧೀಘರ್ಾವದಿ ಹಾಗೂ ದಕ್ಷ ಪ್ರಾಮಾಣಿಕ ಸೇವೆಯನ್ನು ಗಮನಿಸಿ ಚಾಮರಾಜನಗರದಲ್ಲಿ ಇತ್ತೀಚೆಗೆ ನಡೆದ ಭಾರತಿಯ ವೈದ್ಯಕೀಯ ಸಂಘದ 85 ನೇ ವಾಷರ್ಿಕ ವಿಶೇಷ ಸಮಾರಂಭದಲ್ಲಿ ಪ್ರತಿಷ್ಠಿತ ಆದರ್ಶ ವೈದ್ಯ ಪ್ರಶಸ್ತಿ ಪುರಸ್ಕಾರವನ್ನು ನೀಡಿ ರಾಜ್ಯ ಶಿಕ್ಷಣ ಸಚಿವ ಸುರೇಶಕುಮಾರ ಅವರು ಗೌರವಿಸಿ ಸನ್ಮಾನಿಸಿದರು.
ಡಾ.ನಾಯಿಕ ಸೇರಿದಂತೆ ಸನ್ಮಾನಿತಗೊಂಡ ವೈದ್ಯರನ್ನುದ್ದೇಶಿಸಿ ಮಾತನಾಡಿದ ಸುರೇಶಕುಮಾರ ರಾಜ್ಯದಲ್ಲಿ ಕೆಲವು ವೈದ್ಯರು ರೋಗಿಗಳ ಸೇವೆಯಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿದ್ದಾರೆ. ಇಂತಹ ಮಾದರಿ ವೈದ್ಯರನ್ನು ಸನ್ಮಾನಿಸಲು ಅಭಿಮಾನ ಎನಿಸುತ್ತಿದೆಂದು ಹೇಳಿ ಪ್ರತಿಯೊಬ್ಬ ವೈದ್ಯನಲ್ಲಿ ಮಾನವಿಯ ಗುಣಗಳು ಅವಶ್ಯವಾಗಿರಬೇಕು. ರೋಗಿಗಳ ಸೇವೆ ದೇವರ ಸೇವೆ ಅಂತಾ ತಿಳಿದು ವೈದ್ಯರು ಸೇವೆ ಮಾಡಬೇಕೆಂದು ಹೇಳಿದರು.
ಐ.ಎಂ.ಎ. ರಾಜ್ಯ ಅಧ್ಯಕ್ಷ ಡಾ.ಅನ್ನದಾನಿ, ಸೇರಿದಂತೆ ರಾಜ್ಯ ಹಾಗೂ ಎಲ್ಲ ಜಿಲ್ಲೆಯ ಐ.ಎಂ.ಎ.ಪದಾಧಿಕಾರಿಗಳು ಸರ್ವ ಸದಸ್ಯರು ವೈದ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 