ಡೋಣಿ ನದಿ ಹೂಳು ಎತ್ತಿ ಶಾಶ್ವತ ಪರಿಹಾರಕ್ಕೆ ಅಗ್ರಹ : ಸಂಗಮೇಶ ಸಗರ್

ಡೋಣಿ ನದಿ ಹೂಳು ಎತ್ತಿ ಶಾಶ್ವತ ಪರಿಹಾರಕ್ಕೆ ಅಗ್ರಹ : ಸಂಗಮೇಶ ಸಗರ್  Demand for permanent solution to Doni river silting: Sangamesha Sagar

ವಿಜಯಪುರ 22 : ಜಿಲ್ಲೆ ಪಂಚ ನದಿಗಳ ಜಿಲ್ಲೆ ಎಂದು ಖ್ಯಾತಿಯಾಗಿದೆ, ಆದರೆ ಪ್ರತಿ ಎರಡು ವರ್ಷ ಮೂರು ವರ್ಷಕ್ಕೊಮ್ಮೆ ಒಣ ಬರ ಹಸಿಬರ ತಪ್ಪಿದ್ದಲ್ಲ ಇದರಿಂದ ಈ ಭಾಗದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡಿದರು.   

ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದಿಂದ ಇತ್ತ ಕರ್ನಾಟಕದ ಮಾರ್ಗವಾಗಿ ಆಂಧ್ರಕ್ಕೆ ಸೇರುವಂತಹ ದೋಣಿಯು ಸುಮಾರು 215 ಕಿಮೀ ಉದ್ದ ಇದ್ದು ಇದರಲ್ಲಿ ಸಾಕಷ್ಟು ಹೂಳು ತುಂಬಿ, ಮಳೆಗಾಲದಲ್ಲಿ ದೋಣಿ ತುಂಬಿ ಹರಿಯುವಾಗ ಆ ಹೊಳಿನಿಂದ ನೀರು ದೋಣಿ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ತನ್ನ ರುದ್ರಾವತಾರದೊಂದಿಗೆ ಸಾಕಷ್ಟು ನಷ್ಟ ಉಂಟು ಮಾಡುತ್ತದೆ.  

ಇದಕ್ಕಾಗಿ ಹಲವಾರು ವರ್ಷಗಳಿಂದ ಈ ದೋಣಿ ಅಕ್ಕಪಕ್ಕದ ರೈತರು, ರೈತ ಮುಖಂಡರು, ರೈತ ಸಂಘದವರು ಹಾಗೂ ರೈತಪರ ಚಿಂತಕರು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದರು. ಇದಕ್ಕೆ ಒಂದು ಶಾಶ್ವತ ಪರಿಹಾರ ಸಿಕ್ಕಿಲ್ಲ.  ಈ ಕೂಡಲೇ ಕರ್ನಾಟಕದಲ್ಲಿ ಹಾದು ಹೋಗುವಂತ ದೋಣಿಯ ಸಂಪೂರ್ಣ ಅಳತೆಯನ್ನು ಮಾಡಿ ಅಲ್ಲಿರುವಂಥ ಹೂಳನ್ನ ತೆಗೆದು ಅಕ್ಕಪಕ್ಕದಲ್ಲಿ ಕಲಿನ ತಡೆಗೋಡೆ ಮಾಡಿ ದೊಡ್ಡ ದೊಡ್ಡ ಮರಗಳನ್ನು ಹಚ್ಚುವುದರ ಮೂಲಕ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಇದಕ್ಕಾಗಿ ವಿಜಯಪುರದ ಜಿಲ್ಲಾಧಿಕಾರಿಗಳಾದಂತ ಡಾಕ್ಟರ್ ಕೆ ಆನಂದ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಡಾ. ಎಂಬಿ ಪಾಟೀಲ್ ಅವರು ರಾಜ್ಯ ಸರ್ಕಾರಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಿ ಅದಕ್ಕೆ ಬೇಕಾಗುವಂತ ಅನುದಾನವನ್ನ ಮಂಜೂರು ಮಾಡಿಸಬೇಕು ಅಂದಾಗ ಮಾತ್ರ ದೋಣಿಯ ಅಕ್ಕ ಪಕ್ಕದ ರೈತರಿಗೆ ಅನುಕೂಲವಾಗಲಿದೆ  ಅದು ಬಿಟ್ಟು ರೈತರು ನಷ್ಟಗೊಂಡಾಗ ಕೇವಲ ನೆಪ ಮಾತ್ರಕ್ಕೆ ಒಂದು ಕೋಟಿ ಎರಡು ಕೋಟಿ ಐದು ಕೋಟಿ ಅಂತ ಹೇಳಿ ಪ್ರತಿ ವರ್ಷ ನೀವು ಅನುದಾನ ಇಟ್ಟರೂ ಕೂಡ ಇದಕ್ಕೆ ಯಾವುದು ಶಾಶ್ವತ ಪರಿಹಾರ ಆಗುವುದಿಲ್ಲ ಕೂಡಲೇ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರಕ್ಕಾಗಿ ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕು ಅಂತ ಹೇಳಿದರು.

ಈ ಸಂಧರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಭಟಗಿ, ಅಭಿಷೇಕ್ ಹೂಗಾರ ಇದ್ದರು.