ಕಾರವಾರ ಜಿಲ್ಲೆಯಲ್ಲಿ 94 ಜನರಿಗೆ ಕೋವಿಡ್
Covid
ಉತ್ತರ ಕನ್ನಡ ಜಿಲ್ಲೆಯಲ್ಲಿ ೯೪ ಜನರಿಗೆ ಕೋವಿಡ್ ಪಾಜಿಟಿವ್ :
೧೦೫ ಜನ ಗುಣಮುಖ ;
ಯಾವುದೇ ಸಾವು ನೋವಿಲ್ಲ
ಕಾರವಾರ ಅ.21 : ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧುವಾರ ೯೪ ಜನರಿಗೆ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಇದೇ ದಿನ ೧೦೫ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಕೋವಿಡ್ ಬಾಧಿತರು : ಕೋವಿಡ್ ಪಾಜಿಟಿವ್ ಪೀಡಿತರು ಕಾರವಾರದಲ್ಲಿ ೬ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೮, ಹೊನ್ನಾವರದಲ್ಲಿ ೭, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೦, ಸಿದ್ದಾಪುರ ೨, ಯಲ್ಲಾಪುರದಲ್ಲಿ ೧, ಮುಂಡಗೋಡಿನಲ್ಲಿ ೪೯ , ಹಳಿಯಾಳದಲ್ಲಿ ೫, ಹಾಗೂ ಜೋಯಿಡಾದಲ್ಲಿ ೧ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
೧೦೫ ಜನ ಗುಣಮುಖರಾಗಿ ಬಿಡುಗಡೆ : ಕಾರವಾರದಲ್ಲಿ ೮ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೧೧, ಹೊನ್ನಾವರದಲ್ಲಿ ೨೯, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೪, ಸಿದ್ದಾಪುರ ೦, ಯಲ್ಲಾಪುರದಲ್ಲಿ ೦, ಮುಂಡಗೋಡಿನಲ್ಲಿ ೩೮ , ಹಳಿಯಾಳದಲ್ಲಿ ೦, ಹಾಗೂ ಜೋಯಿಡಾದಲ್ಲಿ ೦ ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ ೧೨೩೧೨ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ೧೦೯೪೨ ಜನ ಗುಣಮುSರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಂದ ಒಟ್ಟು ಸಾವಿನ ಸಂಖ್ಯೆ ೧೬೦ .
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 