ರಾಣಿಬೆನ್ನೂರ 01: ಈ ಕ್ಷೇತ್ರದ ಮತದಾರರು ನನ್ನನ್ನು 50 ವರ್ಷಗಳ ಕಾಲ ರಾಜಕೀಯದಲ್ಲಿ ಜೀವಂತವಾಗಿಟ್ಟರು ಅವರ ಋಣ ತೀರಿಸುವುದದು ಆಧ್ಯ ಕರ್ತವ್ವಯವಾಗಿದೆ. ಈ ದೆಸೆಯಲ್ಲಿ ರಾಣಿಬೆನ್ನೂರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬಡವರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಹಿತದೃಷ್ಟಿಯಿಂದ ಕೆ ಬಿ ಕೋಳಿವಾಡ ಚಾರಿಟಬಲ್ ಟ್ರಸ್ಟ್ ಶನಿವಾರ ನೊಂದಾಯಿಸಲಾಗಿದೆ ಎಂದು ಮಾಜಿ ಸಭಾಪತಿ ಕೆ ಬಿ ಕೋಳಿವಾಡ ಹೇಳಿದರು.
ಶನಿವಾರ ಸಂಜೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಶಿಕ್ಷಣ, ಆರೋಗ್ಯ, ಹಸಿವು ನೀಗಿಸಲು ಕೆ ಬಿ ಕೋಳಿವಾಡ ಚಾರಿಟಬಲ್ ಟ್ರಸ್ಟ್ ರಚಿಸಲಾಗಿದ್ದು, ಇಂದು ನಾನು 2 ಲಕ್ಷ, ವರ್ತಕ ಮಲ್ಲೇಶಪ್ಪ ಅರಕೇರಿ ಸೇರಿದಂತೆ ಮತ್ತಿತರ ದಾಬಿಗಳು 69 ಸಾವಿರ ರೂ ದಾನ ಮಾಡಿದ್ದಾರ. ನಾನು ಪ್ರತಿತಿಣಗಳು 70 ಸಾವಿರ ರೂ ಟ್ರಸ್ಟಗೆ ಜಮಾ ಮಾಡುತ್ತೇನೆ ಎಂದರು.. ನಾನು ಸಚಿವನಾದಾಗ ಶಾಸಕನಾದಾಗ ಹಾಗೂ ಸಭಾಪತಿಯಾದಾಗ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ ತೃಪ್ತಿ ನನಗಿದೆ. ಆದರೆ ಈಗ ಯಾವ ಸ್ಥಾನವು ಇಲ್ಲವಾದರೂ ಸಹ ನಮ್ಮ ಕ್ಷೇತ್ರದ ಜನತೆಗೆ ಸೇವೆಯನ್ನು ಸಲ್ಲಿಸುವ ಮಹಾದಶೆಯನ್ನು ಹೊಂದಿ ಈ ಟ್ರಸ್ಟ್ ಮಾಡಿದ್ದೇನೆ ಎಂದರು. ಕ್ಷೇತ್ರದಲ್ಲಿ ಯಾರೊಬ್ಬ ಬಡಮಕ್ಕಳೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಹಸಿವಿನಿಂದ ಬಳಲಬಾರದು ಮತ್ತು ಆರೋಗ್ಯದಿಂದ ಯಾರೂ ಬಳಲಬಾರದು, ಈ ಕ್ಷೇತ್ರದ ಎಸ್ಎಸ್ಎಲ್ಸಿ ಮತ್ತು ಪಿಯಸಿ ಪ್ರತಿಭಾವಂತ ಮೂರು ಮಕ್ಕಳಳಿಗೆ ಪ್ರತಮ 5505, ದ್ವಿತೀಯ 3303, ತೃತೀಯ 2202 ನಗುದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸುವುದರ ಮೂಲಕ ಅವರಿಗೆ ಉತ್ತೇಜನ ನೀಡಲಾಗುವುದು ಎಂದರು.
ಈ ಚಾರಿಟಬಲ್ ಟ್ರಸ್ಟ್ ಯಾವುದೇ ಜಾತಿ, ಪಕ್ಷ ಬೇಧಭಾವವಿಲ್ಲದೆ ಕಾರ್ಯನಿರ್ವಹಿಸುವುದು ಮತ್ತು ಟ್ರಸ್ಟ್ಗೆ ವಾರ್ಡ, ಪಂಚಾಯಿತಿಗೆ ಸಲಹಾ ಸಮಿತಿಯನ್ನು ರಚಿಸಲಾಗುವುದು. ಇಂದು ಕೆ ಬಿ ಕೋಳಿವಾಡ ಚಾರಿಟಬಲ್ ಟ್ರಸ್ಟ್ ಖಾತೆಗೆ 20ಲಕ್ಷ ರೂಗಳನ್ನು ಜಮೆ ಮಾಡಿದ್ದೇನೆ ಮತ್ತು ಪ್ರತಿ ತಿಂಗಳು ನನಗೆ ಬರುವ ಪಿಂಚಣಿ 70ಸಾವಿರ ರೂಗಳನ್ನು ಟ್ರಸ್ಟ್ ಗೆ ನೀಡುತ್ತೇನೆ ಎಂದರು. ಈ ಕ್ಷೇತ್ರದ ಬಡವರ ಶವ ಸಾಗಿಸಲು ಉಚಿತವಾಗಿ ವಾಹನದ ವ್ಯವಸ್ಥೆ ಮಾಡುವುದರ ಮೂಲಕ ಟ್ರಸ್ಟ್ ವತಿಯಿಂದ ಸಹಾಯ ಮಾಡಲಾಗುವುದು. ಈ ಟ್ರಟ್ಗೆ ಯಾವ ಪಕ್ಷದ ನಾಯಕರು ಸಲಹಾ ಸಮಿತಿಗೆ ಬಂದಲ್ಲಿ ಸ್ವಾಗತಿಸೂತ್ತೇವೆ ಎಂದರು.