ಬೆಳ್ಳಿ-ಬೆಡಗು ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ
ಲೋಕದರ್ಶನ ವರದಿ
ಮುನವಳ್ಳಿ 9: ಇದೇ ಜ. 14 ಮತ್ತು 15 ರಂದು ಹರಿಹರ ದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹಾಗೂ ಪಂಚಮಸಾಲಿ ಜಗದ್ಗುರು ಪೀಠದಿಂದ ಜರುಗುವ ಹರಜಾತ್ರಾ ಮಹೋತ್ಸವ ಮತ್ತು ಬೆಳ್ಳಿ-ಬೆಡಗು ಕಾರ್ಯಕ್ರಮದ ಹಿನ್ನಲೆಯಲ್ಲಿ ಪಟ್ಟಣದ ಪಂಚಮಸಾಲಿ ಸಂಘದ ವತಿಯಿಂದ ಪೂರ್ವಭಾವಿ ಸಭೆ ಜ. 8 ರಂದು ರಾತ್ರಿ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಘದ ಮುಖಂಡರಾದ ಶಿವಾನಂದ ಮೇಟಿ ಹಾಗೂ ಕಲ್ಲಪ್ಪ ನಲವಡೆ ಪಂಚಮಸಾಲಿ ಸಂಘ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಬೆಳ್ಳಿ-ಬೆಡಗು ಕಾರ್ಯಕ್ರಮ ಜೊತೆಗೆ ಯುವ ಸಮಾವೇಶ ಮತ್ತು ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಬಂಧು ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಯಿತು.
ಈ ಸಂದರ್ಭದಲ್ಲಿ ಪಂಚಪ್ಪ ಹನಸಿ, ರವಿ ದ್ಯಾಮನಗೌಡರ, ರುದ್ರಗೌಡ ಕಳಸನಗೌಡ್ರ, ಚನ್ನಪ್ಪಗೌಡ ದ್ಯಾಮನಗೌಡ್ರ, ಎಂ.ಎ. ಕಮತಗಿ, ದ್ಯಾಮನಗೌಡ ಬಕಾಡೆ, ರಾಮನಗೌಡ ಗೀದಿಗೌಡ್ರ,ಸತ್ಯಪ್ಪ ಅಡವಿ,ಶ್ರೀಕಾಂತ ಮಲಗೌಡ್ರ, ಸುಭಾಸ ಗೀದಿಗೌಡ್ರ, ಬಸವರಾಜ ಚುಳಕಿ, ಮಂಜುನಾಥ ನವಲಗುಂದ, ರಮೇಶ ಗಂಗನ್ನವರ, ಗುರು ಚಂದರಗಿ,ಉಮೇಶ ಚುಳಕಿ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 