ಮಹಿಳಾ ಸಬಲೀಕರಣ ಸಂದೇಶದ ಸೈಕಲ್ ರ್ಯಾಲಿ ಡಿ.9ರಂದು ಬೆಂಗಳೂರಿನಲ್ಲಿ ಸಮಾಪ್ತಿ: ಎ.ಡಿ.ಜಿ.ಪಿ. ಭಾಸ್ಕರ್ರಾವ್
ಹಾವೇರಿ06: ಮಹಿಳಾ ಸಬಲೀಕರಣದ ಸಂದೇಶ ಹೊತ್ತು ಬೆಳಗಾವಿಯಿಂದ ಬೆಂಗಳೂರಿಗೆ ಕೈಗೊಂಡಿರುವ ಕನರ್ಾಟಕ ಮಹಿಳಾ ಪೊಲೀಸ್ ಯಾತ್ರ್ರೆ ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ ಎಂದು ಕನರ್ಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಅಪರ ಆರಕ್ಷಕ ಮಹಾನಿದರ್ೆಶಕ ಭಾಸ್ಕರ್ರಾವ್ ಅವರು ತಿಳಿಸಿದರು.
ಗುರುವಾರ ನಗರದ ಶಿವಶಕ್ತಿ ಪ್ಯಾಲೇಸ್ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ ಮಹಿಳೆ ಮತ್ತು ಆರೋಗ್ಯ, ಮಹಿಳೆ ಮತ್ತು ಕ್ರೀಡೆ, ಮಹಿಳೆ ಮತ್ತು ನಗರ ಪರಿಸರ, ಮಹಿಳಾ ಮತ್ತು ಪ್ರವಾಸೋದ್ಯಮ ಹಾಗೂ ಹೆಣ್ಣು ಮಗುವಿನ ರಕ್ಷಣೆಯ ಸಂದೇಶದ ಜೊತೆಗೆ ಪೊಲೀಸ್ ಮೀಸಲು ಪಡೆಯ ಮಹಿಳಾ ಪೇದೆ , ಮಹಿಳಾ ಅಧಿಕಾರಿಗಳಲ್ಲಿ ಆತ್ಮ ವಿಶ್ವಾಸ ತುಂಬಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬೆಳಗಾವಿಯಿಂದ ಬೆಂಗಳೂರಿನವರೆಗೆ 540 ಕಿ.ಮೀ.ವರೆಗೆ ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಿ.5ರಂದು ಬೆಳಗಾವಿಯಿಂದ ಸೈಕ್ಲಿಂಗ್ ಯಾತ್ರೆ ಹೊರಟು ಇಂದು ಹಾವೇರಿ ತಲುಪಿದ್ದೇವೆ. ಡಿ.9ರಂದು ಬೆಂಗಳೂರಿಗೆ ತಲುಪಲಿದೆ. ಅಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಸಕರ್ಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ರಾಜ್ಯ ಪೊಲೀಸ್ ಮೀಸಲು ಪಡೆಯ ಮಹಿಳೆಯರು ಯಾವುದೇ ನೆರವಿಲ್ಲದೆ ಸ್ವ ಸಾಮಥ್ರ್ಯದಿಂದ ಸಬಲೀಕರಣಕ್ಕೆ ತನ್ನನ್ನು ಅಪರ್ಿಸಿಕೊಂಡು 540 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ ಮೂಲಕ ಸೈಕಲ್ನಲ್ಲಿ ಸಂಚರಿಸುತ್ತ ಸಂದೇಶವನ್ನು ಸಾರುತ್ತಾ ಹೊರಟಿದ್ದಾರೆ. ದಾರಿಯುದ್ದಕ್ಕೂ ಅಂಗನವಾಡಿ, ಶಾಲಾ-ಕಾಲೇಜು, ಮಹಿಳಾ ಸಂಘಟನೆಗಳನ್ನು ಭೇಟಿ ಮಾಡಿ ಅಲ್ಪಾವಧಿಯ ಸಂವಾದನಡೆ ಮಾಹಿತಿ ಪಡೆದು ಸಾಗುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ಜಾಗೃತಿಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡು ಸಾಗುತ್ತಿದ್ಧಾರೆ ಎಂದು ತಿಳಿಸಿದರು.
ಎಲ್ಲರೂ ಹಳ್ಳಿಯಿಂದ ಬಂದಂತಹ ಮಹಿಳೆಯರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. 45 ಮಹಿಳಾ ಮೀಸಲು ಪಡೆ ಪೇದೆಗಳು, 11 ಮಹಿಳಾ ಪೊಲೀಸ್ ಅಧಿಕಾರಿಗಳು, ನಾಲ್ಕು ಮಹಿಳಾ ಐ.ಎ.ಎಸ್.ಅಧಿಕಾರಿಗಳು, 40 ಜನ ಇತರ ಸಂಘಟನೆಯ ಪ್ರತಿನಿಧಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿದಿನ 100 ಕಿ.ಮೀ. ಸೈಕಲ್ ರ್ಯಾಲಿ ಕ್ರಮಿಸಲಿದೆ. ಹಲವು ಐ.ಎ.ಎಸ್. ಅಧಿಕಾರಿಗಳು ಸಹ ಬೆಂಬಲ ಸೂಚಿಸಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.
ಸೈಕಲ್ ರ್ಯಾಲಿಗೆ ಎಂ.ಎಸ್.ಐ.ಎಲ್., ಕೆ.ಎಂ.ಎಫ್., ಇಂಡಿಯನ್ ಮೆಡಿಕಲ್ ಅಶೋಷಯೇಷನ್, ಜನರಲ್ ತಿಮ್ಮಯ್ಯ ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಬೆಂಬಲಿಸಿವೆ ಎಂದು ತಿಳಿಸಿದರು.
ಸ್ವರ: ಮಹಿಳೆಯರ ಸಂರಕ್ಷಣೆಗಾಗಿ ಸ್ವರ ಕಾರ್ಯಕ್ರಮವನ್ನು ಶೀಘ್ರವೇ ಜಾರಿಗೆ ತರಲಾಗುವುದು. ಮೀಸಲು ಪಡೆಯ ಮಹಿಳಾ ಪೇದೆಗಳಿಗೆ ಸ್ವ ರಕ್ಷಣೆಯ ತರಬೇತಿ ನೀಡಿ ಮಾಸ್ಟರ್ ಟ್ರೈನರ್ರಾಗಿ ರೂಪಿಸಲಾಗುವುದು.
ತರಬೇತಾದ ಪ್ರತಿ ಮಹಿಳಾ ಪೇದೆಗೆ 10 ಶಾಲೆಗಳನ್ನು ದತ್ತು ನೀಡಿ ವಿದ್ಯಾಥರ್ಿನಿಯರಿಗೆ ಸ್ವ ರಕ್ಷಣೆಯ ಕುರಿತಂತೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಕೆ.ಎಸ್.ಆರ್.ಪಿ. ಶಿಗ್ಗಾಂವ ಕಮಾಂಡೆಂಟ್ ಹಾಗೂ ಎಸಿಬಿ ಎಸ್.ಪಿ.ಶೃತಿ, ಗುಲ್ಬರ್ಗ ಕೆ.ಎಸ್.ಆರ್.ಪಿ. ಬೆಟಾಲಿಯನ್ ತರಬೇತಿ ಕೇಂದ್ರ ಪ್ರಾಚಾರ್ಯ ಸವಿತಾ ಹೂಗಾರ, ಸೌಮ್ಯ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 