ವಿಜಯಪುರ: ಕಾರ್ಗಿಲ್ ವಿಜಯ ನಮನ ಕಾರ್ಯಕ್ರಮ
ಲೋಕದರ್ಶನ ವರದಿ
ವಿಜಯಪುರ 25: ನಗರದ ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯ ಮತ್ತು ದೇಶ ರಕ್ಷಕರ ಪಡೆ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ ನಮನ ಸಪ್ತಾಹ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾಣಿಕ್ಯ ಕರಿಯರ ಅಕಾಡಮಿಯ ಲೋಹಿತ ಮೆತ್ರಿ ಮಾತನಾಡಿ, ಅನೇಕ ಜನ ಮಹಾನ ನಾಯಕರು ಹೋರಾಟಗಾರರು ರಾಜರು ಸನ್ಯಾಸಿಗಳು ಜನಸಿದ ನಮ್ಮ ನಾಡು. ನಮ್ಮ ಮೊದಲ ತಾಯಿ ಅಂದರೆ ಅದು ನಮ್ಮ ಭಾರತಾಂಬೆ. ಆ ತಾಯಿಯ ಮಕ್ಕಳಾದ ನಮ್ಮೆಲ್ಲರ ಮೊದಲ ಕರ್ತವ್ಯ ವೆಂದರೆ ದೇಶ ರಕ್ಷಣೆ ಮಾಡುವುದು ಎಂದರು.
ಡಿ.ವಿ. ಕೋಟಿ ಗುರುಗಳು ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿ ಸೇರಬೇಕು ಕರೆ ಎಂದರು. ಮಾಜಿ ಯೋಧರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡ ದೇಶ ರಕ್ಷಕರ ಪಡೆ ಸಂಘಟನೆ ಶ್ಲಾಘನೀಯ. ಭಾರತ ಮಾತೆ ಈ ಸಂಘಟಕರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ದೇಶಭಕ್ತಿ ಕಾರ್ಯಕ್ರಮ ಮಾಡಲಿ ಎಮದು ಆಶಿಸಿದರು.
ಸಂಘಟನೆಯ ಮುಖಂಡರಾದ ರೋಹನ ಆಪ್ಟೆ, ಚನ್ನುಗೌಡಾ ಪಾಟೀಲ, ರಾಘವೇಂದ್ರ ಮಿರೇಕರ, ಆದಿತ್ಯ ತಾವರಗೇರಿ, ಪ್ರೇಮ ಕಳಕೂಟಗಿ, ವಿವೇಕ ತಾವರಗೇರಿ, ವಿಕ್ರಮ ತಾಂಬೇಕಾರ, ಅಜಯ ಸೂರ್ಯವಂಶಿ ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 