'ಇಡೀ ದೇಶವೇ ಕೇರಳಿಗರೊಂದಿಗಿದೆ'
ಹೊಸದಿಲ್ಲಿ 25: 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಓಣಂ ಹಬ್ಬದ ಸ್ಫೂತರ್ಿ ಕೇರಳದ ಜನರಲ್ಲಿ ಹೊಸ ಶಕ್ತಿ ಚೈತನ್ಯವನ್ನು ತುಂಬಿ ಎಲ್ಲ ಪ್ರತಿಕೂಲತೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಹೊಸ ಬಾಳನ್ನು ಕಟ್ಟುವ ಧೈರ್ಯ, ಸ್ಥೈರ್ಯ ನೀಡಲಿ' ಎಂದು ಹೇಳಿದ್ದಾರೆ. ಕೇರಳದ ಜನರ ಈ ಕಷ್ಟಕಾಲದಲ್ಲಿ ಇಡಿಯ ದೇಶವೇ ಅವರೊಂದಿಗೆ ಇದೆ; ಅವರ ಸುಖ, ಸಂತೋಷ, ಸಮೃದ್ಧಿಗೆ ದೇಶದ ಜನರು ಒಂದಾಗಿ ಪ್ರಾಥರ್ಿಸುತ್ತಾರೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಕಳೆದ ಆಗಸ್ಟ್ 8ರಿಂದ ನಿರಂತರ ಜಡಿ ಮಳೆ ಕಂಡು ವ್ಯಾಪಕ ಭೂಕುಸಿತ ಮತ್ತು ಪ್ರವಾಹಕ್ಕೆ 231 ಜನರನ್ನು ಬಲಿ ಪಡೆದ ಈ ಶತಮಾನದ ಅತ್ಯಂತ ಘೋರ ನೈಸಗರ್ಿಕ ಪ್ರಕೋಪವನ್ನು ತಾಳಿಕೊಂಡು ಹೊಸ ಬದುಕನ್ನು ರೂಪಿಸಿಕೊಳ್ಳುವ ಶಕ್ತಿ, ಚೈತನ್ಯವನ್ನು ಕೇರಳದ ಜನರಿಗೆ ದೇವರು ಕರಣಿಸಲೆಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 