ರಾಮದುರ್ಗಃ ಜಯ ಕನರ್ಾಟಕ ಸಂಘಟನೆಯಿಂದ ಶ್ರದ್ಧಾಂಜಲಿ

ಲೋಕದರ್ಶನ ವರದಿ

ರಾಮದುರ್ಗ,22: ಇಹಲೋಕ ತ್ಯಜಿಸಿದ ತುಮಕೂರ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಜಯ ಕನರ್ಾಟಕ ಸಂಘಟನೆಯ ನೇತೃತ್ವದಲ್ಲಿ ಪಟ್ಟಣದ ಹುತಾತ್ಮ ಚೌಕದಲ್ಲಿ ಶ್ರದ್ಧಾಂಜಲಿ ಅಪರ್ಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕಾಧ್ಯಕ್ಷ ವಿಜಯಕುಮಾರ ರಾಠೋಡ, ಶಿವಕುಮಾರ ಸ್ವಾಮೀಜಿಗಳು ಸರಕಾರವೂ ಮಾಡದ ಅಪಾರ ಶಿಕ್ಷಣ, ದಾಸೋಹ ಸೇವೆಯನ್ನು ಯಾರು ಮರೆಯುವಂತಿಲ್ಲ. ಅವರ ಆತ್ಮಕ್ಕೆ ಸ್ವರ್ಗದಲ್ಲಿ ಶಾಂತಿ ದೊರೆತು, ಅಂತಹ ಮಹಾನ್ ಪುರುಷರ ಮರುಜನ್ಮವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಜಯ ಕನರ್ಾಟಕ ಸಂಘಟನೆಯ ಉಪಾಧ್ಯಕ್ಷರಾದ ಕೃಷ್ಣಾ ಬಡಿಗೇರ, ಸುರೇಶ ಗಿಂಜಾಳಿ, ಕಾಯರ್ಾಧ್ಯಕ್ಷ ಆಸೀಫ್ ಹಾಜಿ, ರಾಜ್ಯ ಮುಖಂಡ ಮೆಹಬೂಬಅಲಿ ನದಾಫ, ಪ್ರಧಾನ ಕಾರ್ಯದಶರ್ಿ ಕೃಷ್ಣಾ ರಾಠೋಡ, ಕಾರ್ಯದಶರ್ಿ ಆನಂದ ಕುಮಾರ ಜಾಧವ, ರಾಘವೇಂದ್ರ ದೊಡಮನಿ, ಸುನಿಲ ರಾಠೋಡ ಸೇರಿದಂತೆ ಇತರರಿದ್ದರು.

 

ಇತ್ತೀಚಿನ ಸುದ್ದಿ