ರಾಮತೀರ್ಥ ನಗರದ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ತುತರ್ು ಕ್ರಮ : ಶಾಸಕ ಬೆನಕೆ
ಲೋಕದರ್ಶನ ವರದಿ
ಬೆಳಗಾವಿ 26: ದಿ.26ರಂದು ಶಾಸಕ ಅನಿಲ ಬೆನಕೆರವರು ರಾಮತೀರ್ಥ ನಗರದ 10 ವರ್ಷಗಳಿಂದ ಸರಿಯಾಗಿ ತ್ಯಾಜ್ಯ ವಸ್ತುಗಳ ವಿಲೇವಾರಿಯಾಗದ ಕೆಲಸವನ್ನು ಪೂರ್ಣಗೊಳಿಸಲು ಬುಡಾ ಅಧಿಕಾರಿಗಳ ಜೊತೆ ಸಮನ್ವಯ ಚಚರ್ೆ ನಡೆಸಿ ತ್ಯಾಜ್ಯ ವಿಲೇವಾರಿ ಮಾಡುವ ಸಮಸ್ಯೆಯನ್ನು ಬಗೆಹರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆರವರು ಮಾತನಾಡಿ ರಾಮತೀರ್ಥ ನಗರದ 10 ವರ್ಷಗಳ ಸಮಸ್ಯೆಯಾದ ತ್ಯಾಜ್ಯ ವಿಲೇವಾರಿಯನ್ನು ಬುಡಾ ಅಧಿಕಾರಿಗಳು 2 ದಿನಕೊಮ್ಮೆ ಕಸ ವಿಲೇವಾರಿ ಮಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ರಾಮತೀರ್ಥ ನಗರದ ರಹವಾಸಿಗಳು ಸಹ ಕಸವನ್ನು ಗಟಾರು ಹಾಗೂ ಇನ್ನಿತರೆ ಸ್ಥಳದಲ್ಲಿ ಎಸೆಯದೆ 2 ದಿನಕೊಮ್ಮೆ ಕಸವನ್ನು ಸಂಗ್ರಹಿಸಿ ಕಸವನ್ನು ಎತ್ತಲು ಮನೆ ಮನೆಗೆ ಬರುವ ವಾಹನದಲ್ಲಿ ಹಾಕಬೆಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬುಡಾ ಅಭಿಯಂತರರಾದ ಹಿರೆಮಠರವರು ರಾಮತೀರ್ಥ ನಗರದ ತ್ಯಾಜ್ಯ ವಿಲೇವಾರಿಯನ್ನು ಕೈಗೊಳ್ಳಲು 2 ದಿನಕೊಮ್ಮೆ ಮನೆ ಮನೆಗೆ ಕಸವನ್ನು ಸಂಗ್ರಹಿಸಿ ರಾಮತೀರ್ಥ ನಗರವನ್ನು ಸುಂದರವಾಗಿಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ವಿಲಾಸ ಕೆರೂರ, ಎಸ್.ಎಸ್.ಕಿವಡಸನ್ನವರ, ಎಮ್.ಬಿ. ನಿರವಾನಿ, ರಾಜು ಪಾಟೀಲ, ವಿಜಯಕುಮಾರ ಹೊಸಟ್ಟಿ , ಬುಡಾ ಅಭಿಯಂತರರಾದ ಹಿರೇಮಠ ಹಾಗೂ ರಾಮತೀರ್ಥ ನಗರದ ರಹವಾಸಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 