ರಾಕ್ ಗಾರ್ಡನ್ನಲ್ಲಿ ಸ್ನೇಹಕೂಟ ಸಮಾರಂಭ
ಲೋಕದರ್ಶನ ವರದಿ
ಶಿಗ್ಗಾವಿ10: ಪರಿಶ್ರಮ ಯಶಸ್ಸಿನ ಮೆಟ್ಟಿಲು. ಶ್ರಮಿಕರಿಗೆ ಚೈತನ್ಯ ತುಂಬಲು ಅವರೊಂದಿಗೆ ಒಂದು ದಿನ ಸಂತಸದಿಂದ ಕಳೆಯಬೇಕು. ಇದು ಅಭಿವೃದ್ಧಿಗೆ ಪೂರಕ ಎಂದು ಹಿರೇಕೆರೂರಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯ ಯೋಜನಾಧಿಕಾರಿ ಮೋಹನ ನಾಯಕ್ ಹೇಳಿದರು.
ಗೊಟಗೋಡಿ ಉತ್ಸವ ರಾಕ್ ಗಾರ್ಡನ್ನ ಜಾನಪದ ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಸ್ನೇಹಕೂಟ ಸಮಾರಂಭವನ್ನು ಉದ್ಘಾಟಿಸಿದರು.
ಸ್ನೇಹಕೂಟ ಎಂದರೆ ಒಗ್ಗಟ್ಟಿನ ಸಂಕೇತ ಇಲ್ಲಿ ಎಲ್ಲರೂ ಒಂದೇ ನಮಗೆ ಗೊತ್ತಿರದ ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರೆ ನಿಗದಿತ ಗುರಿ ತಲುಪಲು ಸಹಕಾರಿ ಆಗುತ್ತದೆ ಅಲ್ಲದೆ ಉತ್ಸವ ರಾಕ್ ಗಾರ್ಡನ್ ಹೆಸರಿಗೆ ತಕ್ಕಂತೆ ಎಲ್ಲರಲ್ಲೂ ಹೊಸ ಚೈತನ್ಯ ತುಂಬುತ್ತದೆ ಎಂದ ಮೋಹನ ನಾಯಕ್,ಇದು ಕಲೆ,ಸಂಸ್ಕೃತಿಯ ಬೀಡು ಎಂದರು.
ರಾಜೇಶ್ ಮಾತನಾಡಿ, ಸ್ನೇಹಕೂಟ ನಾವೆಲ್ಲರೂ ಎಂಬ ಭಾವನೆ ಮೂಡಿಸಿತಲ್ಲದೆ ಹೊಸ ಉತ್ಸವ ತುಂಬಿತು ಎಂದರು.
ಯೋಜನೆಯ ಕಾರ್ಯಕರ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ನೇಹಕೂಟ ಅಂಗವಾಗಿ ಏರ್ಪಡಿಸಿದ ಕ್ರೀಡಾಕೂಟದ ವಿಜೇತರಿಗೆ ಯೋಜನಾಧಿಕಾರಿ ಮೋಹನ ನಾಯಕ್ ಬಹುಮಾನ ವಿತರಿಸಿದರು.
ಮಮತಾ, ರಟ್ಟಿಹಳ್ಳಿ, ಮಾಸುರು ವಲಯಗಳ ಮೇಲ್ವಿಚಾರಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಅಣ್ಣಪ್ಪ ಸ್ವಾಗತಿಸಿದರು. ಮೇಲ್ವಿಚಾರಕ ನಟರಾಜ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 