ಸಾಯಿಬಾಬಾ ಸತ್ಸಂಗದಿಂದ ಸೇನಾಭರ್ತಿ ಆಗಮಿಸಿದ ವಿದ್ಯಾರ್ಥಿ ಗಳಿಗೆ ಉಚಿತ ಪ್ರಸಾದ ಸೇವೆ
ಲೋಕದರ್ಶನ ವರದಿ
ಗದಗ 02: ಇತ್ತೀಚಿಗೆ ನಗರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ಭತರ್ಿಗೆ ವಿವಿಧ ಜಿಲ್ಲೆಗಳಿಂದ ಪ್ರತಿದಿನ ಸಾವಿರಾರು ಯುವಕರು ಅರ್ಹತೆ ಪರೀಕ್ಷೆಗಾಗಿ ನಗರಕ್ಕೆ ಬರುತ್ತಿದ್ದು ಅವರಿಗೆ ನಗರದ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ ಸಂಕೇತ ಅಪಾರ್ಟಮೆಂಟ್ ಹತ್ತಿರ ಕಳೆದ ಮೂರು ದಿನಗಳಿಂದ ಪ್ರತಿದಿನ ರಾತ್ರಿ 745 ಗಂಟೆಗೆ ಉಚಿತ ಪ್ರಸಾದ ವಿತರಿಸಲಾಗುತ್ತಿದೆ. ಪ್ರತಿದಿನ ಸುಮಾರು 1000 ದಿಂದ 1500 ಯುವಕರಿಗೆ ಪ್ರಸಾದ ವಿತರಿಸಲಾಗುತ್ತಿದೆ.
ಈ ಪ್ರಸಾದ ಸೇವೆಯಲ್ಲಿ ಸತ್ಸಂಗದ ಅಧ್ಯಕ್ಷ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ವಿ.ಆರ್. ಕುಂಬಾರ, ಕಾರ್ಯದಶರ್ಿ ಶಿವಯ್ಯ ಹಿರೇಮಠ, ಸಿದ್ದಣ್ಣ ಗೌರಿಪುರ, ನಾಗರಾಜ ಗಂಗಾವತಿ, ಸದಾಶಿವಪ್ಪ ವಾಲಿ, ಸತ್ಸಂಗ ಸದಸ್ಯರಾದ ಆರ್. ಆರ್. ಕಾಶಪ್ಪನವರ, ಉಮೇಶ್ ನಾಲವಾಡ, ಡಾ. ಎಸ್. ಬಿ. ಶೆಟ್ಟರ, ಕೆ. ನಾಗೇಶರಾವ, ರವಿಶಂಕರ್ ಚಿಂಚಲಿ, ರವಿಪ್ರಕಾಶ ರಡ್ಡಿ, ಕಾತರ್ಿಕ ಹಿರೇಮಠ, ರವಿ ಘೋಡಕೆ, ನಿರಂಜನ ಹಿರೇಮಠ, ಶಶಿ ಡಿಗ್ಗಾವಿ, ಸಚಿನ,ಸತೀಶ್, ಆದರ್ಶ ಸೇರಿದಂತೆ ಮುಂತಾದವರು ಸೇವೆ ಸಲ್ಲಿಸುತ್ತಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 