ಉಚಿತ ನೇತ್ರ ತಪಾಸಣೆ ಶಿಬಿರ
ಲೋಕದರ್ಶನ ವರದಿ
ಹಾವೇರಿ 26 : ಜೀವನ ಸಾರ್ಥಕ ಆಗಬೇಕಾದರೆ ಸಮಾಜ ಸೇವೆ ಮಾಡುವ ಮನೋಭಾವನೆ ಅವಶ್ಯಕ. ಕಡು ಬಡವರಿಗೆ ಕಣ್ಣುಗಳ ತಪಾಸಣೆ ಹಾಗೂ ಜನೋಪಯೋಗಿ ಕೆಲಸ ಮಾಡಲು ಎಲ್ಲ ಸಂಘಟನೆಗಳು ಮುಂದಾಗಬೇಕು ಎಂದು ಅಖಿಲ ಭಾರತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ ಲಮಾಣಿ ಹೇಳಿದರು.
ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ ಸವಣೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆ,ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ,ತಾಲೂಕ ವೈದ್ಯಾಧಿಕಾರಿಗಳ ಕಛೇರಿ.ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ ಹಾಗೂ ಅಖಿಲ ಭಾರತ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಇವುಗಳ ಸಹಕಾರ, ಸಂಯುಕ್ತಾಶ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಚಾಲನೆ ನೀಡಿ ಅವರು ಮಾತನಾಡಿದರು.ಹಳ್ಳಿ ಜನರಿಗೆ ಸಾಕಷ್ಟು ಸೌಲಭ್ಯಗಳು ಗೊತ್ತೆ ಆಗುವುದಿಲ್ಲ.ವಿದ್ಯಾವಂತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅವುಗಳ ತಿಳುವಳಿಕೆ ಹಾಗೂ ಜಾಗೃತಿ ಕಾರ್ಯ ಮಾಡುವ ಕಾಯಕ ಪ್ರವೃತರಾಗಬೇಕು.ಇಂತಹ ಜನೋಪಯೋಗಿ ಕೆಲಸ ಮಾಡಿದರೆ ಸಮಾಜದ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಸಾಧ್ಯ. ಉತ್ತಮ ಕೆಲಸವನ್ನು ನಮ್ಮ ಸಂಘಟನೆಯ ಮುಖ್ಯ ಧ್ಯೇಯವಾಗಿಟ್ಟುಕೊಂಡು ಮುಂದುವರಿಸುತ್ತೇವೆ ಎಂದರು.ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ಸಾಬ ಬುಡಂದಿ ಮಾತನಾಡಿ ಯುವಕರು ಹಾಗೂ ಸಂಘಟನೆಗಳು ಮನಸ್ಸು ಮಾಡಿದರೆ ದೇಶ ಅಭಿವೃದ್ಧಿ ಹೊಂದುತ್ತದೆ.ನಿಸ್ವಾರ್ಥ ವ್ಯಕ್ತಿಗಳಿಂದ ಸಮಾಜದ ಬದಲಾವಣೆ ಸಾಧ್ಯ.
ಈ ಶಿಬಿರವು ನೂರಾರು ಬಡ ಕುಟುಂಬಗಳಿಗೆ ನೆರವಾಗುತ್ತಿರುವುದು ತುಂಬಾ ಉಪಯುಕ್ತ. ಯುವಕರ ಸೇವಾ ಭಾವಕ್ಕೆ ಹಿರಿಯರ ಅನುಭವ ನೀಡಿದರೆ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂದರು. ನಿವೃತ್ತ ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿಗಳಾದ ಶಿವಾನಂದ ಬಡಶೆಟ್ಟಿ ಯುವಕರಿಗೆ ಮಾರ್ಗದರ್ಶನ ನೀಡಿದರು. ಸಂದರ್ಭದಲ್ಲಿ ಶಿವಮೊಗ್ಗ ಆಸ್ಪತ್ರೆಯ ಡಾ|| ವಿಕ್ರಮ್,ಅರುಣ ಜಿ, ಶಂಕರ ನಾಯ್ಕ.ಸಂಘಟನೆಯ ಫಕ್ಕಿರೇಶ ಕಾಳಿ. ವೆಂಕಟೇಶ ಕರೆಕಲ್ಲ.ಮಾರುತಿ ಬೇವಿನಹಳ್ಳಿ.ಚಂದ್ರು ತಳವಾರ.ಈರಣ್ಣ ಲಮಾಣಿ. ಮಹೇಶ ಪೂಜಾರ.ರಾಜೇಶ ಚವ್ಹಾಣ.ಅರುಣ ಪಾಟೀ.ಮೆಹಬೂಬಸಾಬ ಮುಂಡರಗಿ. ಮಾತೇಶ ಕರಬರಿ ಸೇರಿದಂತೆ ಹಿರೇಮುಗದೂರ ಅಮ್ಮಾ ಸಂಸ್ಥೆ(ರಿ) ಪದಾಧಿಕಾರಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 