ಕೃಷ್ಣಾ ನದಿಯಲ್ಲಿ ಬೈಕ್ ಪತ್ತೆ
ಕಾಗವಾಡ: ಕೃಷ್ಣಾ ನದಿ ನೀರಿನಲ್ಲಿ ಯಾರೋ ಅಜ್ಞಾತರು ಹೊಸದಾದ ಮೋಟರ ಬೈಕ್ ಎಸೆದಿದ್ದು ಉಗಾರ ಖುರ್ದದಲ್ಲಿ ಪತ್ತೆಯಾಗಿದೆ.
ಶುಕ್ರವಾರರಂದು ಉಗಾರ ಖುರ್ದದಲ್ಲಿ ದಿನನಿತ್ಯ ಮೀನುಗಾರರು ನದಿಯಲ್ಲಿ ಮೀನು ಹಿಡಿಯಲು ಹೋದಾಗ ಅವರು ಬೀಸಿದ ಬಲೆ ತಟ್ಟಿದ್ದರಿಂದ ಮೀನುಗಾರರು ನೀರಿನಲ್ಲಿ ಹೋಗಿ ಪತ್ತೆ ಮಾಡಿದಾಗ ಬೈಕ್ ಕಂಡು ಬಂದಿತು. ಕೂಡಲೆ ಕಾಗವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಬೈಕ್ ಹೊರತೆಗೆದರು.
ಹೀರೊ ಹೊಂಡಾ ಕಂಪನಿಯ ಹೊಸದಾದ ಬೈಕ್ ಪತ್ತೆಯಾಗಿದ್ದು, ಎರಡು ಗಾಲಿಗಳು, ಸೆಕ್ಯಾಪ್ಸರ್ ಬಿಚ್ಚಿದ್ದು ಕಂಡು ಬಂತು. ನಂಬರ್ ಪ್ಲೇಟಿನ್ ಮೇಲೆ ಕಂಪನಿಯರು ಎಂ.ಎಚ್.10 ಎಂದು ಬರೆದಿದ್ದಾರೆ. ಅಂದರೆ ಸದರಿ ಬೈಕ್ ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ನೆರೆಯ ಗ್ರಾಮಗಳಿಂದ ಆಗಿರಬಹುದೆಂದು ಕಾಗವಾಡ ಪೊಲೀಸ್ ಠಾಣೆ ಅಧಿಕಾರಿಗಳು ಶಂಖೆ ವ್ಯಕ್ತಪಡಿಸಿದ್ದಾರೆ. ಕಾಗವಾಡ ಪೊಲೀಸ್ ಠಾಣೆ ಎ.ಎಸ್.ಐ ರಾಮಣ್ಣಾ ಹೊರಟ್ಟಿ ಬೈಕ್ ಜಪ್ತಿ ಮಾಡಿ, ಠಾಣೆಗೆ ಒಪ್ಪಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 