ಕೃಷ್ಣಾ ನದಿಯಲ್ಲಿ ಬೈಕ್ ಪತ್ತೆ
ಕಾಗವಾಡ: ಕೃಷ್ಣಾ ನದಿ ನೀರಿನಲ್ಲಿ ಯಾರೋ ಅಜ್ಞಾತರು ಹೊಸದಾದ ಮೋಟರ ಬೈಕ್ ಎಸೆದಿದ್ದು ಉಗಾರ ಖುರ್ದದಲ್ಲಿ ಪತ್ತೆಯಾಗಿದೆ.
ಶುಕ್ರವಾರರಂದು ಉಗಾರ ಖುರ್ದದಲ್ಲಿ ದಿನನಿತ್ಯ ಮೀನುಗಾರರು ನದಿಯಲ್ಲಿ ಮೀನು ಹಿಡಿಯಲು ಹೋದಾಗ ಅವರು ಬೀಸಿದ ಬಲೆ ತಟ್ಟಿದ್ದರಿಂದ ಮೀನುಗಾರರು ನೀರಿನಲ್ಲಿ ಹೋಗಿ ಪತ್ತೆ ಮಾಡಿದಾಗ ಬೈಕ್ ಕಂಡು ಬಂದಿತು. ಕೂಡಲೆ ಕಾಗವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಬೈಕ್ ಹೊರತೆಗೆದರು.
ಹೀರೊ ಹೊಂಡಾ ಕಂಪನಿಯ ಹೊಸದಾದ ಬೈಕ್ ಪತ್ತೆಯಾಗಿದ್ದು, ಎರಡು ಗಾಲಿಗಳು, ಸೆಕ್ಯಾಪ್ಸರ್ ಬಿಚ್ಚಿದ್ದು ಕಂಡು ಬಂತು. ನಂಬರ್ ಪ್ಲೇಟಿನ್ ಮೇಲೆ ಕಂಪನಿಯರು ಎಂ.ಎಚ್.10 ಎಂದು ಬರೆದಿದ್ದಾರೆ. ಅಂದರೆ ಸದರಿ ಬೈಕ್ ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ನೆರೆಯ ಗ್ರಾಮಗಳಿಂದ ಆಗಿರಬಹುದೆಂದು ಕಾಗವಾಡ ಪೊಲೀಸ್ ಠಾಣೆ ಅಧಿಕಾರಿಗಳು ಶಂಖೆ ವ್ಯಕ್ತಪಡಿಸಿದ್ದಾರೆ. ಕಾಗವಾಡ ಪೊಲೀಸ್ ಠಾಣೆ ಎ.ಎಸ್.ಐ ರಾಮಣ್ಣಾ ಹೊರಟ್ಟಿ ಬೈಕ್ ಜಪ್ತಿ ಮಾಡಿ, ಠಾಣೆಗೆ ಒಪ್ಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 