ಜನೇವರಿ 25, ರವಿವಾರ ದಂದು ಬೆಸ್ಟ್ ಟ್ಯಾಲೆಂಟ್ ಏಕ್ಸಾಮ್ - 2026
Best Talent Exam on Sunday, January 25 - 2026
ತಾಳಿಕೋಟಿ 23: ಪಟ್ಟಣದ ಶ್ರೀ.ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಬೆಸ್ಟ್ ಪಿ.ಯು ಸೈನ್ಸ್ ಕಾಲೇಜು ಹಾಗೂ ಭವಿತಾ ನೀಟ್ ಅಕಾಡಮಿ ಬೆಂಗಳೂರು ಇವರ ವತಿಯಿಂದ ಜನೇವರಿ 25 ರವಿವಾರ ದಂದು ಬೆಸ್ಟ್ ಟ್ಯಾಲೆಂಟ್ ಏಕ್ಸಾಮ್ 2026ರ ಸ್ಕಾಲರ್ಶಿಪ್ ಪರೀಕ್ಷೆಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಮುಖ್ಯಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ್ ಅವರು ತಿಳಿಸಿದರು. ಭವಿತಾನೀಟ್ ಅಕಾಡಮಿಬೆಂಗಳೂರು ಇದರ ಸಂಸ್ಥಾಪಕರಾದ ಶ್ರೀದತ್ತಾತ್ರೇಯ ಅವರು ಮಾತನಾಡಿ ಈ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ಹಾಗೂ ತೃತಿಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತಶಿಕ್ಷಣ ನೀಡಲಾಗುವುದು ಮತ್ತು 4 ರಿಂದ 10 ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 75ಅ ಕಾಲೇಜು ಫೀಯಲ್ಲಿ ಹಾಗೂ 11 ರಿಂದ 20 ನೇಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 50ಅ ಕಾಲೇಜು ಫೀಯಲ್ಲಿ, ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಶ್ರೀ. ಘನಮಠೇಶ್ವರ ಆಂಗ್ಲ ಮಾದ್ಯಮ ಫ್ರೌಡಶಾಲೆಯ ಪ್ರಾಂಶುಪಾಲರಾದ ಬಸವರಾಜ ಸಜ್ಜನ್ ರವರು ಮಾತನಾಡಿ ಈ ಬಾರಿಎಸ್.ಎಸ್. ಎಲ್.ಸಿಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳು ಬೆಸ್ಟ್ ಟ್ಯಾಲೆಂಟ್ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 