ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆ
Worship and special puja of Jokamara Swami
ಗದಗ 07: ಅವಳಿ ನಗರವಾದ ಗದಗ ಬೆಟಗೇರಿ ನಗರದ ಬೆಟಗೇರಿಯ ತೆಗ್ಗಿನಪೇಟೆಯಲ್ಲಿರುವ ರಾಮಚಂದ್ರ ದೇವೇಂದ್ರ್ಪ ಬಾರಕೇರ ಅವರ ಮನೆಯಲ್ಲಿ ಸಮುದಾಯದ ಮಹಿಳೆಯರು ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಜೋಕಮಾರನನ್ನ ಪುಟ್ಟಿಯಲ್ಲಿ ಕೂಡಿಸಿಕೊಂಡು ಜೋಕಮಾರನ ವರ್ಣನೆಯ ಜನಪದ ಗೀತೆಗಳನ್ನು ಲಯಬದ್ಧವಾಗಿ ನುಡಿಯುತ್ತಾ ನಗರದ ವಿವಿಧ ಬಡಾವಣೆಯಲ್ಲಿ ತಿರುಗಾಡುತ್ತಾರೆ. ಜೋಕಮಾರ ಮನೆ ಎದರು ಪ್ರತ್ಯಕ್ಷ ವಾದಾಗ ಅಕ್ಕಿ ಇನ್ನಿತರ ಬಗೆಯ ಕಾಳು ಕಡಿಯನ್ನ ಅರ್ಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಗಂಗಾಮತಸ್ಥರ ಮೂಲ ಸಂಸ್ಕೃತಿಯ ಸಂಪ್ರದಾಯ ಮುಂದುವರಿಸಿಕೊಂಡು ಹೊಗುತ್ತಿರುವ ಸಮುದಾಯದ ಮಹಿಳೆಯರಿಗೆ ಅಭಿನಂದಿಸಿ ಮಾತನಾಡಿದ ಅಂಬಿಗ ಸಮುದಾಯದ ಪ್ರಧಾನ ಕಾರ್ಯದರ್ಶಿಯಾದ ಸಂಗಮೇಶ ಹಾದಿಮನಿ ಯವರು ಜೋಕಮಾರ ನ ಹಾಡಿನ ವರ್ಣನೆಯ ಜನಪದ ಶೈಲಿ ವಿಶಿಷ್ಟವಾಗಿದ್ದು ಎಂದರು
ರಾಮಚಂದ್ರ ಬಾರಕೇರ. ರವಿ ಬಾರಕೇರ ಶೇಖವ್ವ ಬಾರಕೇರ ಚಂದ್ರಕಾಂತ ಬಾರಕೇರ ಸಮುದಾಯದ ಮಹಿಳೆಯರಾದ ಸಕ್ರಮ್ಮ ಜಾಲಗಾರ ಕಮಲಮ್ಮ ಕದಡಿ ರೂಪಾ ಜಾಲಗಾರ ಶಿವಮ್ಮ ಕದಡಿ ಶಾಂತಕ್ಕ ಕದಡಿ ಜೋಕಮಾರನ ಹಾಡನ್ನ ಲಯ ಬದ್ದವಾಗಿ ಹಾಡಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 