ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆ
Worship and special puja of Jokamara Swami
ಗದಗ 07: ಅವಳಿ ನಗರವಾದ ಗದಗ ಬೆಟಗೇರಿ ನಗರದ ಬೆಟಗೇರಿಯ ತೆಗ್ಗಿನಪೇಟೆಯಲ್ಲಿರುವ ರಾಮಚಂದ್ರ ದೇವೇಂದ್ರ್ಪ ಬಾರಕೇರ ಅವರ ಮನೆಯಲ್ಲಿ ಸಮುದಾಯದ ಮಹಿಳೆಯರು ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಜೋಕಮಾರನನ್ನ ಪುಟ್ಟಿಯಲ್ಲಿ ಕೂಡಿಸಿಕೊಂಡು ಜೋಕಮಾರನ ವರ್ಣನೆಯ ಜನಪದ ಗೀತೆಗಳನ್ನು ಲಯಬದ್ಧವಾಗಿ ನುಡಿಯುತ್ತಾ ನಗರದ ವಿವಿಧ ಬಡಾವಣೆಯಲ್ಲಿ ತಿರುಗಾಡುತ್ತಾರೆ. ಜೋಕಮಾರ ಮನೆ ಎದರು ಪ್ರತ್ಯಕ್ಷ ವಾದಾಗ ಅಕ್ಕಿ ಇನ್ನಿತರ ಬಗೆಯ ಕಾಳು ಕಡಿಯನ್ನ ಅರ್ಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಗಂಗಾಮತಸ್ಥರ ಮೂಲ ಸಂಸ್ಕೃತಿಯ ಸಂಪ್ರದಾಯ ಮುಂದುವರಿಸಿಕೊಂಡು ಹೊಗುತ್ತಿರುವ ಸಮುದಾಯದ ಮಹಿಳೆಯರಿಗೆ ಅಭಿನಂದಿಸಿ ಮಾತನಾಡಿದ ಅಂಬಿಗ ಸಮುದಾಯದ ಪ್ರಧಾನ ಕಾರ್ಯದರ್ಶಿಯಾದ ಸಂಗಮೇಶ ಹಾದಿಮನಿ ಯವರು ಜೋಕಮಾರ ನ ಹಾಡಿನ ವರ್ಣನೆಯ ಜನಪದ ಶೈಲಿ ವಿಶಿಷ್ಟವಾಗಿದ್ದು ಎಂದರು
ರಾಮಚಂದ್ರ ಬಾರಕೇರ. ರವಿ ಬಾರಕೇರ ಶೇಖವ್ವ ಬಾರಕೇರ ಚಂದ್ರಕಾಂತ ಬಾರಕೇರ ಸಮುದಾಯದ ಮಹಿಳೆಯರಾದ ಸಕ್ರಮ್ಮ ಜಾಲಗಾರ ಕಮಲಮ್ಮ ಕದಡಿ ರೂಪಾ ಜಾಲಗಾರ ಶಿವಮ್ಮ ಕದಡಿ ಶಾಂತಕ್ಕ ಕದಡಿ ಜೋಕಮಾರನ ಹಾಡನ್ನ ಲಯ ಬದ್ದವಾಗಿ ಹಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 