ಹನುಮ ಮಾಲಾಧಾರಿಗಳಿಂದ ಇರುಮುಡಿ ಧಾರಣೆ
Wearing of Irumudi by Hanuman Maladharis
ಲೋಕದರ್ಶನ ವರದಿ
ಕಂಪ್ಲಿ 02: ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರದ ಅಯ್ಯಪ್ಪ ಸ್ವಾಮಿ ಮತ್ತು ಗದ್ದಿ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಹನುಮಜಯಂತಿಯ ಪ್ರಯುಕ್ತವಾಗಿ ಹನುಮ ಮಾಲಾಧಾರಿಗಳು ಇರುಮುಡಿ ಧಾರಣೆ ಮತ್ತು ಅನ್ನ ಸಂತರೆ್ಣ ಕಾರ್ಯಕ್ರಮ ಜರುಗಿತು.ಇಂದು ಬೆಳಿಗ್ಗೆ ಅಯ್ಯಪ್ಪಸ್ವಾಮಿಗೆ ಮತ್ತು ಗದ್ದಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶೇಷ ವೇದಿಕೆಯನ್ನು ನಿರ್ಮಿಸಿ ಆಂಜಿನೇಯನ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಹನುಮ ಮಾಲಾಧಾರಿಗಳಿಗೆ ಗುರುಸ್ವಾಮಿಗಳು ಇರುಮುಡಿಯನ್ನು ಪೂಜಿಸಿ ಹನುಮ ಮಾಲಾಧಾರಿಗಳ ತಲೆಯ ಮೇಲೆ ಇರಿಸಿ ಪೂಜೆಯನ್ನು ಸಲ್ಲಿಸಿದರು.
ನಂತರ ಇರುಮುಡಿ ಧರಿಸಿದ ಹನುಮ ಮಾಲಾಧಾರಿಗಳಿಗೆ ಕುಟುಂಬದ ಸದಸ್ಯರು ಮಾಲಾರ್ಾಣೆ ಮಾಡಿ ಶುಭ ಹಾರೈಸಿದರು.ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 45ಕ್ಕೂ ಅಧಿಕ ಹನುಮನ ಭಕ್ತರು ಹನುಮ ಮಾಲೆಗಳನ್ನು ಧರಿಸಿದ್ದರು. ಇರುಮುಡಿ ಧಾರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಎನ್.ಗಣೇಶ್ ಭಾಗವಹಿಸಿ ಆಂಜಿನೇಯನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಇರುಮುಡಿ ಧರಿಸಿದ ಹನುಮ ಮಾಲಾಧಾರಿಗಳಿಗೆ ಶುಭಕೋರಿದರಲ್ಲದೆ, ನಾಡಿನಲ್ಲಿ ಮಳೆ, ಬೆಳೆ ಉತ್ತಮವಾಗಿ ಆಗಲಿ, ಅನ್ನದಾತರಿಗೆ ಉತ್ತಮ ಮೌಲ್ಯ ದೊರೆಯಲಿ ಎಂದು ಹಾರೈಸಿದರು. ನಂತರ ಅನ್ನಸಂತರೆ್ಣ ಜರುಗಿತು. ಸಂಜೆ ಹನುಮ ಮಾಲಾಧಾರಿಗಳು ಮೆರವಣಿಗೆಯ ಮೂಲಕ ಅಂಜನಾದ್ರಿಯ ಆಂಜಿನೇಯ ಸ್ವಾಮಿಯ ಪುಣ್ಯಕ್ಷೇತ್ರಕ್ಕೆ ಪಾದಾಯತ್ರೆ ಬೆಳೆಸಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದ ಹನುಮ ಮಾಲಾಧಾರಿಗಳ ಪಾದಾಯಾತ್ರೆಗೆ ಸಾರ್ವಜನಿರು ಶುಭಹಾರೈಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 