ವೀರಯೋಧ ವಿಜಯಾನಂದ ಮನೆಗೆ ಬಿಎಸ್ಎಫ್ ಹಿರಿಯ ಅಧಿಕಾರಿಗಳ ಭೇಟಿ
ಛತ್ತೀಸಗಡ ಬಿಎಸ್ಎಫ್ 121 ಬೆಟಾಲಿಯನ್ ಕಚೇರಿ ಆವರಣದಲ್ಲಿ ಹುತಾತ್ಮ ಯೋಧರ ಪ್ರತಿಮೆ
ಕಾರವಾರ: ಕಳೆದ ಜುಲೈನಲ್ಲಿ ಛತ್ತೀಸಗಡ
ಬಸ್ತರನಲ್ಲಿ ನೆಲೆ ಬಾಂಬ್ ಸ್ಫೋಟದಲ್ಲಿ
ವೀರಮರಣ ಅಪ್ಪಿದ್ದ ಕಾರವಾರದ ಯೋಧ ವಿಜಯಾನಂದ ನಾಯ್ಕ
ಅವರ ಮನೆಗೆ ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಬಿಎಸ್ಎಫ್
ಯೋಧರು ಸಂಗ್ರಹಿಸಿದ್ದ 2 ಲಕ್ಷ ರೂ.ಪರಿಹಾರದ
ಚೆಕ್ ಹಾಗೂ ಗೃಹ ಸಚಿವ
ರಾಜನಾಥ ಸಿಂಗ್ ನೀಡಿದ್ದ ಪ್ರಮಾಣಪತ್ರ, ಮೆಡಲ್ನ್ನು ವಿಜಯಾನಂದ ತಂದೆ ತಾಯಿಗೆ ಹಸ್ತಾಂತರಿಸಿದರು.
ಸೋಮವಾರ ಕಾರವಾರದಲ್ಲಿನ ವಿಜಯಾನಂದ ಅವರ ಮನೆಗೆ ಆಗಮಿಸಿದ
ಅವರು ಛತೀಸಗಡದಲ್ಲಿನ ಬಿಎಸ್ಎಫ್ 121 ಬೆಟಾಲಿಯನ್ ಕಚೇರಿ ಆವರಣದಲ್ಲಿ ಹುತಾತ್ಮರಾದ ವೀರಯೋಧ ವಿಜಯಾನಂದ ಸುರೇಶ್ ನಾಯ್ಕ ಹಾಗೂ ಖಾನಾಪುರದ ಸಂತೋಷ
ಎಲ್.ಗುರವ ಅವರ ಪ್ರತಿಮೆ
ಸ್ಥಾಪನೆಗೆ ನಿರ್ಧರಿಸಲಾಗಿದೆ. ಪ್ರತಿಮೆಗಳ ಸ್ಥಾಪನೆಯ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಿಜಯಾನಂದ ತಂದೆ ಸುರೇಶ್ ವಿ.ನಾಯ್ಕ ಹಾಗೂ ತಾಯಿ ವಿದ್ಯಾ
ಅವರನ್ನು ಆಹ್ವಾನಿಸಿದರು.
ಇದೇ ತಿಂಗಳಾಂತ್ಯಕ್ಕೆ ವೀರಯೋಧರ
ಪ್ರತಿಮೆ ಸ್ಥಾಪನೆಯ ಸಮಾರಂಭ ಛತ್ತೀಸಗಡದಲ್ಲಿ ಜರುಗಲಿದೆ. ಬಿಎಸ್ಎಫ್
121 ಬೆಟಾಲಿಯನ್ ಯೋಧರು ಸಂಗ್ರಹಿಸಿದ್ದ 2 ಲಕ್ಷ ರೂ.ಪರಿಹಾರದ
ಚೆಕ್ನ್ನು ಸಹ ಇದೇ ವೇಳೆ
ವಿಜಯಾನಂದ ಕುಟುಂಬಕ್ಕೆ ನೀಡಲಾಯಿತು.
ಖಾನಾಪುರದ ಸಂತೋಷ ಎಲ್.ನಾಯ್ಕ ಅವರ
ಕುಟುಂಬದವರನ್ನು ಸಹ ಆಹ್ವಾನಿಸಿ ಅವರಿಗೆ
ಸಹ 2 ಲಕ್ಷ ರೂ. ಮೊತ್ತದ
ಚೆಕ್ ನೀಡಿರುವುದಾಗಿ ಬಿಎಸ್ಎಫ್ ಹಿರಿಯ ಅಧಿಕಾರಿಗಳು ತಿಳಿಸಿದರು. ವಿಜಯಾನಂದ ನಾಯ್ಕ ಅವರ ಸಮವಸ್ತ್ರ ಹಾಗೂ
ಮೆಡಲ್ಗಳನ್ನು ಅವರ ಕುಟುಂಬಕ್ಕೆ ನೀಡಲಾಗಿದೆ.
ಅವರ ಕುಟುಂಬಕ್ಕೆ ದೊರೆಯಬೇಕಾದ
ಪರಿಹಾರದ ನಿಧಿ ಬ್ಯಾಂಕ್ ಖಾತೆಗೆ
ಜಮಾ ಆಗಿದೆ ಎಂದು ಅವರು ವಿವರಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 