ಶಿಗ್ಗಾವಿ 01: ಕ್ಷೇತ್ರದಲ್ಲಿ ನಡೆಯುತ್ತಿರುವ ಇಸ್ಪೇಟ್, ಮಟ್ಕಾದಂತ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡವರು ಅನೈತಿಕ ಜನರು ಹೊರತು, ನನ್ನ ಅಪ್ತರಲ್ಲ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ನನ್ನ ಸಂಬಂಧಿಗಳು ಭಾಗಿಯಾದರು ಅವರಿಗೂ ಸಹ ಕಠಿಣ ಕಾನೂನು ಶಿಕ್ಷೆಯಾಗಲಿ ಎಂದು ಶಾಸಕ ಯಾಸಿರಖಾನ್ ಪಠಾಣ ಹೇಳಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶಿಗ್ಗಾವಿ ಕ್ಷೇತ್ರದಲ್ಲಿ ಇಸ್ಪೇಟ್ ಮಟ್ಕಾ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯದಂತೆ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ.ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಗೆ ತರುವಂತೆ ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ.ಸಂಸದ ಬೊಮ್ಮಾಯಿಅವರು ನನ್ನೊಂದಿಗೆ ಕೈಜೋಡಿಸಲಿ ಎಂದರು.
ಬೊಮ್ಮಾಯಿ ಸಾಹೇಬರು ಗೃಹ ಸಚಿವ, ಮುಖ್ಯಮಂತ್ರಿಯಾಗಿದ್ದಾಗ ಇಸ್ಪೇಟ್, ಮಟ್ಕಾದಂತ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತಂದು ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದ್ದವರು ಈಗ ಶಾಸಕರೇ ಇಸ್ಪೇಟ್ ಆಡಿಸುತ್ತಿದ್ದಾರೆ ಎಂದು ಆರೋಪಿಸುವುದು ಹಾಸ್ಯಸ್ಪದ ಎಂದು ಶಾಸಕ ಯಾಸೀರಖಾನ್ ಪಠಾಣ ತಿಳಿಸಿದರು. ಈಗಾಗಲೇ ಇಸ್ಪೇಟ್ ಆಟಗಳಲ್ಲಿ ತೊಡುಗಿದ 50 ಜನರ ವಿರುದ್ಧ ಪೊಲೀಸ್ರು ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ ಆದರೆ, ಮರುದಿನವೇ ಜಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಅಧಿಕಾರ ಪೊಲೀಸ್ರಿಗಿಲ್ಲ. ಶಾಸಕರ ಅಪ್ತರು ಎಂಬ ಕಾರಣಕ್ಕೆ ದೂರು ದಾಖಲಾಗಿಲ್ಲ ಎಂದುಬೊಮ್ಮಾಯಿ ಅವರ ಆರೋಪ ಸತ್ಯಕ್ಕೆ ದೂರುವಾಗಿದ್ದು, ಅನೈತಿಕ ಆಟದಲ್ಲಿ ಭಾಗಿಯಾಗುವರಿಗೆ ಜಾತಿ, ಪಕ್ಷ ಇಲ್ಲ. ಬಿಜೆಪಿಗರು ಇಸ್ಪೇಟ್ ಆಟದಲ್ಲಿ ತೊಡುಗಿದ್ದರು ಎಂದು ತಿರುಗೇಟು ನೀಡಿದರು.ಶಾಸಕರಾಗಿ ಮೂರು ತಿಂಗಳದಲ್ಲಿ ನೂರು ಹಳ್ಳಿಗಳಿಗೆ ಹೋಗಿದ್ದೇನೆ. ಜನರು ಸಮಸ್ಯೆ ಆಲಿಸಿದ್ದೇನೆ. ಅಕ್ರಮ ಸರಾಯಿ ಮಾರಾಟದ ಬಗ್ಗೆ ಮಹಿಳೆಯರಿಂದ ದೂರುಗಳು ಬಂದಾಗ ಸ್ವತಃ ನಾನೇ ದೂರು ಸೂಚಿಸಿದ್ದೇನೆ. ನಾಲ್ಕೈದು ತಿಂಗಳಲ್ಲಿ 47 ದೂರುಗಳು ದಾಖಲಾಗಿವೆ. ಆದರೆ, ಸಂಸದ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಎಷ್ಟು ದೂರು ದಾಖಲಾಗಿವೆ? ಹಳ್ಳಿಗಳಿಗೆ ಅವರು ಹೋಗುತ್ತಿರಲಿಲ್ಲ ಜನರು ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಶಿಗ್ಗಾವಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಬೊಮ್ಮಾಯಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೀಟರ್ ದಂದೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾದರೂವಿರೋಧ ಮಾಡುತ್ತಿದ್ದಾರೆ. ಅವರ ಎಡ, ಬಲಕ್ಕೆ ಇರುವವರೇ ಇಂತಹ ದಂಧೆಗಿಳದಿದ್ದಾರೆ ಎಂದು ಗಂಭಿರ ಆರೋಪ ಮಾಡಿದರು. ಒಂದೇ ತಿಂಗಳು ರಾಜಕಾರಣ ಮಾಡುತ್ತೇನೆ ಉಳಿದ ಸಮಯದಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದವರು ಮೂರೇ ತಿಂಗಳದಲ್ಲಿ ಏಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಶಿಗ್ಗಾವಿ ಜನರು ಶಾಂತಿ ಪ್ರೀಯರು. ನನಗೂ ಮತ್ತು ಬೊಮ್ಮಾಯಿವರಿಗೂ ಗೌರವ ಕೊಟ್ಟಿದ್ದಾರೆ. ಕ್ಷೇತ್ರದ ಜನರ ಬದುಕು ಕಟ್ಟಿಕೊಡೋಣ ಹೊರತು, ಯಾವುದೊಂದು ವಿಷಯದಲ್ಲಿ ಭಾವನೆಗಳನ್ನು ಎಳೆದು ತರುವುದು ಬೇಡ ಎಂದು ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.