ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ
ಲೋಕದರ್ಶನ ವರದಿ
ಶಿಗ್ಗಾವಿ 12: ತಾಲೂಕಿನ ಹಿರೇಮಲ್ಲೂರ ಗ್ರಾಮ ಲೆಕ್ಕಾಧಿಕಾರಿ ಆನಂದ ಯಮನಪ್ಪ ದೇಸಾಯಿ. ಚಿಕ್ಕಮಲ್ಲೂರ ಗ್ರಾಮದ ಶೇಖಪ್ಪ ಭೀಮಪ್ಪ ಸಂಜೀವಪ್ಪನವರ ಇವರ ತಂದೆ ತೀರಿಕೊಂಡಿದ್ದರಿಂದ ಜಮೀನಿನ ವಾರಸಾ ಮಾಡಿಕೊಡಲು 6 ಸಾವಿರಗಳ ಹಣದ ಬೇಡಿಕೆಯಿಟ್ಟು ಕೊನೆಗೆ 3500 ರೂಗಳಿಗೆ ಒಪ್ಪಿಸಿ ಕಾನೂನು ಬಾಹಿರವಾಗಿ ಹಣ ಪಡೆಯುತ್ತಿರುವಾಗ ದಾಖಲೆಯ ಸಮೇತ ಶುಕ್ರವಾರ ಎ.ಸಿ.ಬಿ ಬಲೆಗೆ ಬಿದ್ದಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಡಿ.ವಾಯ್.ಎಸ್.ಪಿ ಎ.ಸಿ.ಬಿ ಪ್ರಲ್ಹಾದ ಎಸ್.ಕೆ, ಖಚಿತ ಮಾಹಿತಿ ನೀಡಿದ್ದು ಗ್ರಾಮಲೆಕ್ಕಾಧಿಕಾರಿ ಹಣ ಪಡೆಯುತ್ತಿರುವುದು ಖಚಿತ ಮಾಹಿತಿ ಮೇರೆಗೆ ಬಲೆ ಬೀಸಿದ್ದು ದೂರಿನನ್ವಯ ಕೇಸ ದಾಖಲಿಸಿ ಕ್ರಮ ಕೈಗೊಂಡಿದ್ದೇವೆ ಎಂದು ಖಚಿತ ಪಡಿಸಿದ್ದಾರೆ. ಜೊತೆಗೆ ಈತನು ಆಗಾಗ ಸಾರ್ವಜನಿಕರಿಗೆ ಹಣದ ಕುರಿತು ಪದೆ ಪದೆ ಕಿರಿ ಕಿರಿ ಮಾಡುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು. ಕಾಯರ್ಾಚರಣೆಯಲ್ಲಿ ಸುದರ್ಶನ ಕೆ.ಪಿ, ಬಸವರಾಜ ಹಳವಣ್ಣರ ಭಾಗವಹಿಸಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 