ಶಿರಗುಪ್ಪಿಯಲ್ಲಿ ಸಮುದಾಯ ಭವನ ಕಾಮಗಾರಿಗೆ ಚಾಲನೆ..
Subhash Patil demands that MLA Raju Kage be given a ministerial position
ಲೋಕದರ್ಶನ ವರದಿ
ಶಾಸಕ ರಾಜು ಕಾಗೆಯವರಿಗೆ ಸಚಿವ ಸ್ಥಾನ ನೀಡಿ: ಸುಭಾಷ ಪಾಟೀಲ ಒತ್ತಾಯ..!!
ಕಾಗವಾಡ 28: ಐದು ಬಾರಿ ಶಾಸಕರಾಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಮತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ರಾಜು ಕಾಗೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಸುಭಾಷ ಪಾಟೀಲ ಒತ್ತಾಯಿಸಿದ್ದಾರೆ.
ಅವರು, ಗುರುವಾರ ದಿ. 28 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಾಸಕ ರಾಜು ಕಾಗೆ ಇವರ 20 ಲಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಇವರ ತಲಾ 5 ಲಕ್ಷ ಅನುದಾನ ಹೀಗೆ ಒಟ್ಟು ರೂ. 30 ಲಕ್ಷದ ಸಮುದಾಯ ಭವನ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಗಣ್ಯರೊಂದಿಗೆ ಸೇರಿ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು.
ಈ ವೇಳೆ ಸುಭಾಷ ಪಾಟೀಲ, ವಿಜಯ ಅಕಿವಾಟೆ, ದೀಪುಗೌಡಾ ಪಾಟೀಲ, ಭೀಮು ಅಕಿವಾಟೆ, ಕೆ.ಸಿ. ಪಾಟೀಲ, ರಾಜೇಂದ್ರ ಚೌಗುಲೆ, ಅನೀಲ ಚೌಗುಲೆ, ಪ್ರಕಾಶ ಹೆಮಗೀರೆ, ಬಿ.ಜಿ. ಪಾಟೀಲ, ಈರಗೌಡಾ ಪಾಟೀಲ, ಗಣೇಶ ಪಾಟೀಲ, ಆರ್.ಎಸ್. ಪಾಟೀಲ, ಡಾ. ಅಮೋಲ ಸರಡೆ, ಸುರೇಶ ಚೌಗುಲೆ, ಶ್ರೀಮಂತ ಸುಳಕೂಡೆ, ಶೇಖರ ಪಾಟೀಲ, ಐ.ಎ. ಪಾಟೀಲ, ವಿವೇಕ ಪಾಟೀಲ, ಎ.ಆರ್. ಪಾಟೀಲ, ತಮ್ಮಣ್ಣಿ ಬೆನ್ನಾಡಿ, ಪ್ರಸನ್ನ ಬಾಡಗೆ, ರವೀಂದ್ರ ಪಾಟೀಲ, ದಯಾನಂದ ಸವದೆ, ಶಂಕರ ಸವದೆ, ಶಂಕರ ಸುಳಕೂಡೆ, ತಮ್ಮಣ್ಣಾ ತಮದಡ್ಡಿ, ಸಂತೋಶ ಪಾಟೀಲ, ಮಲಗೌಡಾ ಪಾಟೀಲ, ವಿನೋದ ಮೆಟಗೂಳೆ, ದಾದಗೌಡಾ ಪಾಟೀಲ, ಶಿವಶಾಂತ ಚೌಗುಲೆ, ಮಲ್ಲಯ್ಯ ಹಿರೇಮಠ, ಗುತ್ತಿಗೆದಾರರಾದ ಸೋಮರಾಜ ಪಾಟೀಲ, ಪ್ರಕಾಶ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 