ವರುಣದೇವನ ಕೃಪೆಗಾಗಿ ವಿಶೇಷ ಪೂಜೆ
ಬ್ಯಾಡಗಿ೦೫: ಮಳೆ ಕೊರತೆಯಿಂದ ಭೀಕರ ಬರಗಾಲದ ಛಾಯೆ ಎದುರಾಗಿದೆ, ಪ್ರಸಕ್ತ ವರ್ಷ ಜೂನ ತಿಂಗಳು ಆರಂಭವಾದರೂ ಎಲ್ಲಿಯೂ ಮಳೆಯಾಗುತ್ತಿಲ್ಲ ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತಿದೆ, ವಾಡಿಕೆಯಂತೆ ಈಗಾಗಲೇ ಬಿತ್ತನೆ ಕಾರ್ಯ ಮುಕ್ತಾಯ ಗೊಳ್ಳಬೇಕಾಗಿತ್ತು, ಹೀಗಾದರೇ ರೈತರು ಪರಿಸ್ಥಿತಿ ತೀರಾ ಸಂಕಷ್ಟಕ್ಕೊಳಪಡಲಿದೆ, ಆದರೆ ಈ ಭಾಗದಲ್ಲಿ ಮಳೆಯಾಗದೇ ಇರುವುದು ರೈತರನ್ನು ದೃತಿಗೆಡಿಸಿದೆ, ದೇವರು ಈಗಲಾದರೂ ಮಳೆಯನ್ನು ಕರುಣಿಸಲಿ ಪೂಜೆ ಪುನಸ್ಕಾರಗಳನ್ನು ನಿರಂತರವಾಗಿ ನಡೆಸಲಿದ್ದೇವೆ ಎಂದು ಜಗದೀಶ ಕಣಗಲಬಾವಿ ಹೇಳಿದರು.
ಕೈಕೊಟ್ಟ ಮಳೆಯಿಂದ ಕಂಗಾಲಾದ ಚಿಕ್ಕಬಾಸೂರ ಗ್ರಾಮಸ್ಥರು ಸಿದ್ದರಾಮೇಶ್ವರ ಹಾಗೂ ಸಂಗನಬಸವೇಶ್ವರ ದೇವರಿಗೆ ಪರ್ಜನ್ಯ ಜಪ, ಅಭಿಷೇಕ, ಹೋಮ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಮೊರೆಯಿಟ್ಟರು.
ವೀರಭದ್ರಪ್ಪ ಗೊಡಚಿ ಮಾತನಾಡಿ, ಗ್ರಾಮದಲ್ಲಿ ಉತ್ತಮವಾದ ಮಳೆ ಹಾಗೂ ಬೆಳೆಗಾಗಿ ಹಿಂದಿನಿಂದಲೂ ಪೂಜೆ, ಅಭಿಷೇಕ, ಜಪ, ತಪ, ಪೂಜೆ ಅನುಷ್ಠಾನ ಮಾಡಿಕೊಂಡು ಬಂದಿರುವ ಸಂಪ್ರದಾಯವಿದೆ, ಸಿದ್ಧರಾಮೇಶ್ವರ ದೇವರ ಕೃಪೆಯಿಂದ ಉತ್ತಮ ಮಳೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಚನ್ನಬಸಣ್ಣ ನಿಟ್ಟೂರ, ಚನ್ನಬಸಪ್ಪ ಅಣಜಿ, ಸುಭಾಸ್ ಹೊಂಕಣದ, ಸಿದ್ರಾಮಗೌಡ ಚನ್ನಗೌಡ್ರ, ರುದ್ರಪ್ಪ ಪುರವಂತಗೌಡ್ರ, ಜಯಣ್ಣ ಮಲ್ಲಿಗಾರ, ಜಗದೀಶಪ್ಪ ಮಂಕಾವಿ, ಶಶಿಧರ ಕನವಳ್ಳಿ, ಫಕ್ಕಿರೇಶ ಅಜಗೊಂಡ್ರ, ನಾಗರಾಜ ಹಂಜೇರ, ಶಿವರಾಯಪ್ಪ ಹುಳ್ಳೆರ, ನಾಗರಾಜ ಬಟ್ಟೇರ, ಕುಮಾರಯ್ಯ ಪ್ಯಾಟಿಮಠ ಇನ್ನಿತರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 