ಫಲಶ್ರುತಿಲೋಕದರ್ಶನ ವರದಿಗೆ ತ್ವರಿತವಾಗಿ ಸ್ಪಂದಿಸಿ ತಾತ್ಕಾಲಿಕ ದುರಸ್ಥಿ ಕಾರ್ಯ

ಫಲಶ್ರುತಿಲೋಕದರ್ಶನ ವರದಿಗೆ ತ್ವರಿತವಾಗಿ ಸ್ಪಂದಿಸಿ ತಾತ್ಕಾಲಿಕ ದುರಸ್ಥಿ ಕಾರ್ಯ  Respond quickly to Phalashruti Lokdarshan report and carry out temporary repairs

ಲೋಕದರ್ಶನ ವರದಿ

ದಾಂಡೇಲಿ 30: ಮೇ.28 ರಂದು ಸೇತುವೆಯಲ್ಲಿ ಕುಸಿದು ಬಿದ್ದ ಅಡಿಪಾಯದ ಕಲ್ಲುಗಳು, ಜನರ ಸಂಚಾರಕ್ಕೆ ತೊಂದರೆ ಎನ್ನುವ ಶೀರ್ಷಿಕೆಯಡಿ ಲೋಕದರ್ಶನದಲ್ಲಿ ಪ್ರಕಟಗೊಂಡ ವರದಿಗೆ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ತಾತ್ಕಾಲಿಕ ದುರಸ್ಥಿ ಕಾರ್ಯ ಪ್ರಾರಂಭಿಸಿದ್ದಾರೆ.  ಈ ವರದಿಯಲ್ಲಿ ಕುಳಗಿ ರಸ್ತೆಯಲ್ಲಿರುವ ಕಾಳಿನದಿ ಸೇತುವೆಯ ಕೋಗಿಲಬನ ಭಾಗದ ರಕ್ಷಣಾ ಗೋಡೆ ಕುಸಿಯುವ ಹಂತದಲ್ಲಿದೆ. ಗೋಡೆ ಯಾವ ಕ್ಷಣದಲ್ಲಾದರೂ ಕುಸಿದು ಜನರ ಜೀವಕ್ಕೆ ಅಪಾಯ ತರುವ ಸಾದ್ಯತೆಯ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣ ಸೇತುವೆಯ ರಕ್ಷಣಾ ಗೋಡೆ ಪರೀಶೀಲಿಸಿ ತ್ವರಿತವಾಗಿ ದುರಸ್ತಿ ಕಾರ್ಯವನ್ನು ಆರಂಭಿಸಿದ್ದಾರೆ. ಸೂಪಾ ಡ್ಯಾಮನಿಂದನೀರು ಬಿಡುವದನ್ನು ನಿಲ್ಲಿಸಿರುವದರಿಂದ ನದಿ ನೀರು ಏರುವ ಮುನ್ನ ಈ ತಾತ್ಕಾಲಿಕ ದುರಸ್ಥಿ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡುತ್ತಿದ್ದಾರೆ.