ರಾಣೇಬೆನ್ನೂರು ಆವರಗೊಳ್ಳ ಹಿರೇಮಠ: ಕಾರ್ತಿಕ ದೀಪೋತ್ಸವ
Ranebennur Awaragolla Hiremath: Karthika Deepotsava
ರಾಣೇಬೆನ್ನೂರು:ನ 20 ಇಲ್ಲಿನ ದೊಡ್ಡಪೇಟೆಯ ಹಿರೇಮಠದ ಪಂಚಾ ಚಾರ್ಯ ಅವರಗೊಳ್ಳ ಗುರುಕಾರಣ್ಯಮಂಗಲ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಧಾರ್ಮಿಕ ವಾರ್ಷಿಕ ಸಂಪ್ರದಾಯದ ಕಾರ್ಯಕ್ರಮವು ಅತ್ಯಂತ ಭಕ್ತಿ ಭಾವದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಾರ್ತಿಕೋತ್ಸವದ ದಿವ್ಯ ಸಾನಿಧ್ಯವನ್ನು ಆವರಗೊಳ್ಳ ಮತ್ತು ರಾಣೆಬೆನ್ನೂರು ಹಿರೇಮಠದ ಓಂಕಾರ ಶಿವಾಚಾರ್ಯ ಮಹಾ ಸ್ವಾಮಿಗಳವರು ವಹಿಸಿ, ಕಾರ್ತಿಕೋತ್ಸವದ ಮಹತ್ವವನ್ನು ತಮ್ಮ ಸಂದೇಶಾಮೃತದಲ್ಲಿ ಭಕ್ತರಿಗೆ ನೀಡಿದರು.
ಕಾರ್ಯಕ್ರಮದ ಮುಂಚೂಣಿಯಲ್ಲಿ ಗಣ್ಯರಾದ ವಿ. ಎಸ್.ಹಿರೇಮಠ, ಎಸ್.ಸಿ. ಷಡಕ್ಷರಿಮಠ, ಸೋಮನಾಥ ಹಿರೇಮಠ, ಅಮೃತ ಗೌಡ ಹಿರೇಮಠ, ಮುಕ್ತೇಶ ಕೂರಗುಂದ ಮಠ, ಫಕ್ಕೀರೇಶ ಭಸ್ಮಾಂಗಿಮಠ, ಎಸ್.ವಿ. ಉಜ್ಜಯಿನಿಮಠ, ಜಗದೀಶ ಅಜ್ಜೋಡಿಮಠ, ಜಗದೀಶ ಮಳಿಮಠ, ಶಿವಯೋಗಿ ಹಿರೇಮಠ, ರಾಜಶೇಖರ ಬೆಳವಿಗಿ ಮಠ, ಗಣೇಶ ಬೆಲ್ಲದ, ಸುಮಂಗಲ ಹಿರೇಮಠ, ಜ್ಯೋತಿ, ಚೈತ್ರಾ ಕಿತ್ತೂರಮಠ, ಕವಿತಾ ಆರಾಧ್ಯಮಠ, ಎಮ್. ಕೆ. ಹಾಲಸ್ವಾಮಿ ಸೇರಿದಂತೆ ಜಂಗಮ ಸಮಾಜ ಹಾಗೂ ನೌಕರರ ವೇದಿಕೆಯ ಪದಾಧಿಕಾರಿಗಳು ಧಾರ್ಮಿಕ, ಆಧ್ಯಾತ್ಮಿಕ ಕಾರ್ತಿಕ ದೀಪೋತ್ಸವದಲ್ಲಿ ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 