ಗುಜ್ಜರ್ ಸಹಿತ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿ ನೀಡಿದ ರಾಜಸ್ಥಾನ
ಗುಜ್ಜರ್ ಸಮುದಾಯ ಸಹಿತ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿಗೆ ಅನುಮೋದನೆ ನೀಡಿದೆ.
ಜೈಪುರ 02: ಅತೀ ಹಿಂದುಳಿದ ವರ್ಗಗಳ ಕೆಟಗರಿಯಡಿ ರಾಜಸ್ಥಾನ ಸರಕಾರ ಇಂದು ಸೋಮವಾರ ಗುಜ್ಜರ್ ಸಮುದಾಯ ಸಹಿತ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿಗೆ ಅನುಮೋದನೆ ನೀಡಿದೆ.
ಇದೇ ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜೈಪುರ ರಾಲಿ ನಡೆಯುವುದಕ್ಕೆ ಪೂರ್ವಭಾವಿ ಎಂಬಂತೆ ಈ ಮೀಸಲಾತಿಯನ್ನು ರಾಜಸ್ಥಾನ ಸರಕಾರ ಪ್ರಕಟಿಸಿದೆ.
ಪ್ರಧಾನಿ ಮೋದಿ ಅವರ ರಾಲಿ ನಡೆಯುವ ತಾಣದಲ್ಲೇ ತಾವು ಮೀಸಲಾತಿಯನ್ನು ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಗುಜ್ಜರ್ ಸಮುದಾಯದವರು ಈ ಮೊದಲು ಬೆದರಿಕೆ ಹಾಕಿದ್ದರು.
ಪ್ರಧಾನಿ ಮೋದಿ ಅವರು ತಮ್ಮ ರಾಲಿ ನಡೆಯುವ ತಾಣದಲ್ಲೇ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಭೇಟಿಯಾಗುವರು.
ಶೇ. 1ರ ಮೀಸಲಾತಿಯ ಲಾಭ ಪಡೆಯುವ ಸಮುದಾಯಗಳೆಂದರೆ ಗೋದಿಯಾ ಲೋಹರ್, ಬಂಜಾರಾ, ಗುಜ್ಜರ್, ರೈಕಾ ಮತ್ತು ಗಡಾರಿಯಾ.
ಈ ಸಮುದಾಯಗಳಿಗೆ ಶೇ.1ರ ಮೀಸಲಾತಿಯನ್ನು ಕಲ್ಪಿಸುವ ದಿಶೆಯಲ್ಲಿ ಸರಕಾರ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಮೊದಲನೇಯದು ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಕ್ಕೆ ಸಂಬಂಧಿಸಿದ ಮೀಸಲಾತಿ. ಎರಡನೇದು ಸರಕಾರಿ ಉದ್ಯೋಗಗಳಲ್ಲಿನ ಮೀಸಲಾತಿ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 