ಹಿಂದಿ ಕಲಿಕೆಯಿಂದ ವಿಫುಲ ಉದ್ಯೋಗಾವಕಾಶ: ಡಾ.ಭಟ್ಟ
ಲೋಕದರ್ಶನವರದಿ
ಹಾವೇರಿ 01: ಹಿಂದಿ ಭಾಷೆಯು ಮುತ್ತುಗಳಂತಿರುವ ಭಾರತೀಯ ಭಾಷೆಗಳನ್ನು ಹಾರವನ್ನಾಗಿ ಮಾಡುವ, ಒಂದೇ ಸೂತ್ರದಲ್ಲಿ ಜೋಡಿಸುವ ಸಂಪರ್ಕ ಕೊಂಡಿಯಾಗಿದ್ದು, ಭಾರತೀಯ ಎಲ್ಲ ಭಾಷೆಗಳಿಗೆ ತನ್ನದೇ ಆದ ಗೌರವ ಸ್ಥಾನಮಾನಗಳಿವೆ ಎಂದು ಧಾರವಾಡ ಕನರ್ಾಟಕ ವಿಶ್ವವಿದ್ಯಾಲಯ ಹಿಂದಿ ವಿಭಾಗದ ಮುಖ್ಯಸ್ಥೆ ಡಾ|| ಪ್ರಭಾ ಭಟ್ಟ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಹಿಂದಿ ವಿಭಾಗವು ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಂದಿ ಅಧ್ಯಯನದಿಂದ ಕೇಂದ್ರ ಮತ್ತು ರಾಜ್ಯ ಸಕರ್ಾರಗಳಲ್ಲಿ ವಿವಿಧ ಹಂತದ ಉದ್ಯೋಗಾವಕಾಶಗಳು ಲಭ್ಯವಿದ್ದು ಅನುವಾದಕ, ದೂರದರ್ಶನ ಮತ್ತು ರೇಡಿಯೋಗಳಲ್ಲಿ ನಿವರ್ಾಹಕ, ನಿರೂಪಕ, ವಾತರ್ಾ ಇಲಾಖೆ, ಜಾಹೀರಾತು, ಸಿನೆಮಾ, ಮಾಧ್ಯಮ ಹೀಗೆ ಮೊದಲಾದ ರಂಗಗಳಲ್ಲಿ ಉದ್ಯೋಗ ಸೃಷ್ಟಿ ಇದೆ. ಇದರ ಸದುಪಯೋಗವನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಪಡೆಯಲು ವಿದ್ಯಾಥರ್ಿಗಳು ಮುಂದಾಗಬೇಕು ಎಂದರು.
ವಿಭಾಗದ ಮುಖ್ಯಸ್ಥೆ ಡಾ|| ಎಂ. ಪಿ. ಕಣವಿ ಅಧ್ಯಕ್ಷತೆ ವಹಿಸಿದ್ದರು. ಅನಿತಾ ಉಗರಗೋಳ ಸ್ವಾಗತಿಸಿದರು. ಸ್ಪೂತರ್ಿ ಕೋರಿಶೆಟ್ಟರ ಪರಿಚಯಿಸಿದರು. ಅನುಷಾ ಕಾಮತ್ ನಿರ್ವಹಿಸಿದರು. ಶಾಹೀನ ಹಣಗಿ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 