ಉತ್ತರ ಕರ್ನಾಟಕದಲ್ಲಿ ಮುಂಗಾರು ಚುರುಕು
ಬೆಂಗಳೂರು, ಜುಲೈ 19 ರಾಜ್ಯದ ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಹಲವೆಡೆ ಭಾರಿ ಮಳೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಕೂಡ ವರ್ಷಧಾರೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗೇರುಸೊಪ್ಪದಲ್ಲಿ ಅತಿ ಹೆಚ್ಚು 17 ಸೆ.ಮೀ. ಮಳೆ ದಾಖಲಾಗಿದೆ. ಉಳಿದಂತೆ, ಸಿದ್ದಾಪುರ 17, ಆಗುಂಬೆ 14, ಮಂಗಳೂರು, ಕದ್ರಾ ತಲಾ 11, ಲಿಂಗನಮಕ್ಕಿ 9, ಬೈಲಹೊಂಗಲ 8, ಹೊನ್ನಾವರ, ಶೃಂಗೇರಿ ತಲಾ 7, ರಾಣೆಬೆನ್ನೂರು, ಬಿ.ದುರ್ಗಾ ತಲಾ 6, ಮೂಡಬಿದಿರೆ, ಪುತ್ತೂರು, ಕಾರ್ಕಳ, ಕೊಲ್ಲೂರು, ಕಿರವಟ್ಟಿ, ಸವದತ್ತಿ, ಚಿಂಚೋಳಿ, ಬಾಗಮಂಗಲ, ಶ್ರೀರಾಮಪುರ ತಲಾ 5, ಸುಬ್ರಹ್ಮಣ್ಯ , ಜಯಪುರ, ಬೆಂಗಳೂರಿನಲ್ಲಿ ತಲಾ 4, ಮಂಗಳೂರು, ಮಾನಿ, ಭಟ್ಕಳ, ಅಂಕೋಲ, ಹಾವೇರಿ, ಹುನಗುಂದ, ಬಾಗೇವಾಡಿ, ಮಡಿಕೇರಿ, ತಾಳಗುಪ್ಪ, ಬೇಲೂರು, ಚಿಕ್ಕಬಳ್ಳಾಪುರದಲ್ಲಿ ತಲಾ 3, ಸುಳ್ಯ, ಕೋಟಾ, ಶಿರಾಳಿ, ಮಂಕಿ, ಸಿದ್ದಾಪುರ, ಮುನ್ಡಗೋಡು, ಹಳಿಯಾಳ, ನರಗುಂದ, ಕಲಬುರಗಿ, ಹೊಸನಗರ, ಬಸರಾಳು, ಮದ್ದೂರು, ಹೊನ್ನಾಳಿ, ಹೊಸದುರ್ಗ, ಹುಲಿಯೂರು ದುರ್ಗ, ರಾಮನಗರ, ಚನ್ನಪಟ್ಟಣದಲ್ಲಿ ತಲಾ 2 ಸೆ.ಮೀ ಮಳೆಯಾಗಿದೆ.
ಶನಿವಾರ ಮುಂಜಾನೆಯವರೆಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 28 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಬಹುದಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 