ಬೃಹತ್ ಪ್ರಮಾಣದ ಉಚಿತ ಆರೋಗ್ಯ ಶಿಬಿರ
ಬಾಗಲಕೋಟೆ೨೯ : ನಗರದ ಸೆ್ಟೀಶನ್ ರಸ್ತೆಯಲ್ಲಿರುವ ದುಗರ್ಾವಿಹಾರ ವೈದ್ಯಕೀಯ ಕೇಂದ್ರದಲ್ಲಿ ಇಂದು ನಡೆದ ಬೃಹತ್ ಪ್ರಮಾಣದ ಆರೋಗ್ಯ ಶಿಬಿರದಲ್ಲಿ 65 ಹೃದಯ ರೋಗಿಗಳು, 25 ಕ್ಕೂ ಹೆಚ್ಚು ಸ್ತ್ರೀ ರೋಗ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ಹಾಗೂ ಮಾರ್ಗದರ್ಶನ ಮಾಡಲಾಯಿತು.
ನಗರದ ಖ್ಯಾತ ಹೃದಯ ರೋಗ ತಜ್ಞ ಡಾ. ಸಮೀರರಾವ್ ಕುಲಕಣರ್ಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಸಹನಾರಾವ್ ಅವರು ತಮ್ಮ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಉಚಿತ ತಪಾಸಣೆ ನಡೆಸಿದರು. ಸುಮಾರು 65 ಹೃದಯ ರೋಗಿಗಳಿಗೆ ಇಸಿಜಿ, ಮಧುಮೇಹ, ರಕ್ತ ತಪಾಸಣೆ ನಡೆಸಿ ಸಲಹೆ ನೀಡಲಾಯಿತಲ್ಲದೇ ಉಚಿತ ಮಾತ್ರೆಗಳನ್ನು ನೀಡಲಾಯಿತು.
ಡಾ. ಸಹನಾರಾವ್ ಅವರು 25 ಕ್ಕೂ ಹೆಚ್ಚು ಸ್ತ್ರೀ ರೋಗಿಗಳ ಕಾಯಿಲೆ ಪರೀಕ್ಷಿಸಿ ಸಲಹೆ ನೀಡಿದರು.
ಒತ್ತಡದ ಬದುಕಿನಲ್ಲಿ ದೈನಂದಿನ ಬದುಕು, ಆಹಾರ ಪದ್ಧತಿ ಬಗ್ಗೆ ಉಭಯ ವೈದ್ಯರು ರೋಗಿಗಳಿಗೆ ಮಾರ್ಗದರ್ಶನ ಮಾಡಿದರು. ಆಸ್ಪತ್ರೆಯ ಸಂಚಾಲಕ ಕೆ. ರಾಘವೇಂದ್ರರಾವ್ ಉಪಸ್ಥಿತರಿದ್ದರು.
ಡಾ. ಪ್ರಶಾಂತ ಚಿಂಚೊಳ್ಳಿ, ಸಂಜೀವ ಗುಡಿ, ರಾಘು ಗುಮಾಸ್ತೆ, ಪವನ ಸೀಮಿಕೇರಿ, ಭಾಸ್ಕರ ಮನಗೂಳಿ, ಸಂತೋಷ ಚಾವರೆ, ಆದರ್ಶ ಗಲಗಲಿ, ಸಂಜೀವ ಜೋಶಿ, ಅನೀಲ ಮುಳಗುಂದ ಮತ್ತಿತರರು ಆರೋಗ್ಯ ಶಿಬಿರದಲ್ಲಿ ನೆರವಾದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 