ಇತಿಹಾಸಜ್ಞ ರಾಮಚಂದ್ರ ಗುಹ ಬಂಧನಕ್ಕೆ ಮಮತಾ ಕಿಡಿ
ಕೋಲ್ಕತಾ,
ಡಿ 19 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಇತಿಹಾಸಜ್ಞ ರಾಮಚಂದ್ರ ಗುಹ
ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಖಂಡಿಸಿದ್ದಾರೆ. ಟ್ವಿಟರ್ ಮೂಲಕ ಕಿಡಿ ಕಾರಿರುವ ಮಮತಾ,
"ಈ ಸರ್ಕಾರವು ಹೆದರುತ್ತಿದೆ ವಿದ್ಯಾರ್ಥಿಗಳು ಹಾಗೂ ಭಾರತದ ಅತ್ಯಂತ ನಿಪುಣ ಇತಿಹಾಸಕಾರರಿಗೆ
ಹೆದರುತ್ತಿದೆ” ಎಂದು ಹೇಳಿದ್ದಾರೆ. "ರಾಮ್ ಗುಹಾ ಬಂಧನವನ್ನು ನಾನು ಖಂಡಿಸುತ್ತೇನೆ. ಬಂಧನಕ್ಕೊಳಗಾಗಿರುವ
ಎಲ್ಲರಿಗೂ ನಮ್ಮ ಬೆಂಬಲವಿದೆ” ಎಂದು ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ ಸಿ ಕುರಿತು
ಮಾಧ್ಯಮಗಳೊಂದಿಗೆ ಮಾತನಾಡಿದ್ದಕ್ಕಾಗಿ ಹಾಗೂ, ಗಾಂಧೀಜಿಯ ಪೋಸ್ಟರ್ ಅನ್ನು ಹಿಡಿದು ಟೌನ್ ಹಾಲ್ ಬಳಿ
ಪ್ರತಿಭಟನೆ ನಡೆಸಿದ ರಾಮಚಂದ್ರ ಗುಹ ಹಾಗೂ ಇತರ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 