ಕೊಳೆತ ಸ್ಥಿತಿಯಲ್ಲಿ ಪುರುಷ ಶವ ಪತ್ತೆ: ಕೊಲೆ ಶಂಕೆ
Male body found in decomposed state: Murder suspected
ಕೊಳೆತ ಸ್ಥಿತಿಯಲ್ಲಿ ಪುರುಷ ಶವ ಪತ್ತೆ: ಕೊಲೆ ಶಂಕೆ
ರಾಯಬಾಗ 19: ತಾಲೂಕಿನ ನಸಲಾಪುರ ಗ್ರಾಮದ ವ್ಯಾಪ್ತಿಯ ಶಿವಶಕ್ತಿ ಫ್ಯಾಕ್ಟರಿಯ ಹತ್ತಿರ ಯಡ್ರಾಂವದಿಂದ-ಬಾವನ ಸೌಂದತ್ತಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿರುವ ಪುರುಷ ಓರ್ವನ ಶವ ದೊರೆತಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯನ್ನು ರಾಯಬಾಗ ಪಟ್ಟಣದ ದಸ್ತಗಿರ ಇಬ್ರಾಹಿಂ ಮೊಮಿನ (38) ಎಂದು ತಿಳಿದು ಬಂದಿದೆ. ಮೃತನ ತಾಯಿ ಮಾಬೂಬಿ ಮೊಮಿನ ಇವಳು ರಾಯಬಾಗ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಮಗ ಗೌಂಡಿ ಮತ್ತು ಕ್ಲೀನರ್ ಕೆಲಸ ಮಾಡುತ್ತಿದ್ದು, ಅತಿಯಾದ ಕುಡಿತದ ಚಟ ಹೊಂದಿದ್ದನು. ಮಾ.15 ರಂದು ಸಾಯಂಕಾಲ ಮನೆಯಿಂದ ಊರಲ್ಲಿ ಹೋಗಿ ಬರುವುದಾಗಿ ಹೇಳಿ ಹೋಗಿದ್ದ. ತನ್ನ ಮಗನ ಸಾವಿನ ಬಗ್ಗೆ ಸಂಶಯ ಇರುವುದಾಗಿ ದೂರು ದಾಖಲಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 