ಎನ್ಎಮ್ಎಮ್ಎಸ್ ಪರೀಕ್ಷೆ ಸದುಪಯೋಗಿಸಿಕೊಳ್ಳಿ: ಸಾವಳಗಿ
Make the most of the NMMS exam: Savalagi
ತಾಳಿಕೋಟೆ 12: ಎನ್ಎಮ್ಎಮ್ಎಸ್ ಪರೀಕ್ಷೆ 8 ನೇಯ ವರ್ಗದಲ್ಲಿ ಓದುವ ಮಕ್ಕಳಿಗಾಗಿ ಸರಕಾರದ ಸ್ಕಾಲರಶಿಪ್ಗಾಗಿ ಸ್ಪರ್ಧಾತ್ಮಕ
ಪರೀಕ್ಷೆ ಆಗಿದ್ದು ಒಟ್ಟು 90 ಅಂಕದ ಎರಡು ಪೇಪರ್ ಬರೆಯಬೇಕು. ಅದರಲ್ಲಿ ಉತ್ತೀರ್ಣರಾದರೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಗಳಂತೆ ನಾಲ್ಕು ವರ್ಷ ಸರಕಾರ ಸ್ಕಾಲರ್ಶಿಪ್ ನೀಡುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಬಲಬರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹತ್ತನೆ ವರ್ಗದ ವಿದ್ಯಾರ್ಥಿನಿಯರು ಆರಂಭದಿಂದ ಸರಿಯಾಗಿ ಅಭ್ಯಾಸ ಮಾಡಿ ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು, ಪರೀಕ್ಷೆ ಹತ್ತಿರ ಬಂದಾಗ ಓದಿದರಾಯಿತು ಎಂಬ ತಾತ್ಸಾರ ಮಾಡಬಾರದು, ಪ್ರತಿದಿನ ಆದಿನದ ಅಭ್ಯಾಸ ಮುಗಿಸಬೇಕು, ಗ್ರಹ ಕಾರ್ಯ ತಪ್ಪದೇ ಮಾಡಬೇಕು ಎಂದು ತಿಳಿಸಿದರು.
ಎನ್ಎಮ್ಎಮ್ಎಸ್ ನೋಡಲ್ ಅಧಿಕಾರಿ ಅಮೋಘಸಿದ್ದ ಬಗಲಿ ಎನ್ಎಮ್ಎಮ್ಎಸ್ ಪರೀಕ್ಷಾ ವಿವರ ತಿಳಿಸಿದರು. 8ನೇ ವರ್ಗದಲ್ಲಿ ಓದು ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಇದರ ಸದುಪಯೋಗ ಪಡೆಬೇಕು ಅದಕ್ಕಾಗಿ ಎಲ್ಲರು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಡಾ.ಅನಿಲಕುಮಾರ ಇರಾಜ, ಶಿಕ್ಷಕರಾದ ಪಿ.ಬಿ.ದೇಶಮುಖ, ಎಮ್.ಎಮ್.ಕಾಂಬಳೆ, ಪಿ.ಪಿ.ಬಸರಕೋಡ, ಎಮ್.ವಾಯ್.ಕೇಸರಿ, ಪಿ.ಎಮ್. ಬೆಳಗಲ್ಲ ಸಹನಾ ಕಶೆಟ್ಟಿ, ಎಮ್. ವಾಯ್.ಚಲವಾದಿ, ಹರೀಶ ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 