ಕಾಮಗಾರಿ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಶಾಸಕ ಐಹೊಳೆ ಸೂಚನೆ
MLA Aihole instructs officials to complete the work soon
ರಾಯಬಾಗ, 17 : ತಾಲೂಕಿನ ಬಾವನಸೌಂದತ್ತಿ ಗ್ರಾಮದ ಕೃಷ್ಣಾ ನದಿ ದಡದಲ್ಲಿ ನಿರ್ಮಿಸುತ್ತಿರುವ ಕೆರೆ ತುಂಬುವ ಯೋಜನೆ ಕಾಮಗಾರಿಯ ಜಾಕ್ವೇಲ್ನ್ನು ಶಾಸಕ ಡಿ.ಎಮ್.ಐಹೊಳೆರವರು ಮಂಗಳವಾರ ವಿಕ್ಷಣೆ ನಡೆಸಿ, ಕಾಮಗಾರಿ ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ತಾಲೂಕಿನ 39 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಈಗಾಗಲೇ ಪ್ರತಿಶತ 90 ರಷ್ಟು ಕಾಮಗಾರಿ ಮುಗದಿದ್ದು, ಇನ್ನುಳಿದ ಕಾಮಗಾರಿ ಬೇಗನೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಉಳಿದಿದ್ದು, ಅದನ್ನು ಕೂಡ ಈಗ ಅಧಿಕಾರಿಗಳೊಂದಿಗೆ ಮಾತನಾಡಿ ಬಗೆ ಹರಿಸಲಾಗಿದೆ ಎಂದು ತಿಳಿಸಿದರು. ಸುಮಾರು 100 ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಯೋಜನೆಯಿಂದ ದಕ್ಷಿಣ ಭಾಗದ ಮಳೆ ಆಶ್ರಿತ ಪ್ರದೇಶಗಳ ಜನ-ಜಾನುವಾರುಗಳಿಗೆ ಹಾಗೂ ಅಂತರಜಲ ಮಟ್ಟ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು. ಮಳೆಗಾಲದಲ್ಲಿ ಕೃಷ್ಣಾ ನದಿ ನೀರು ತುಂಬಿ ಹರಿಯುತ್ತಿರುವುದರಿಂದ, ಹೆಸ್ಕಾಂ ಇಲಾಖೆಯವರು 33 ಕೆವ್ಹಿ ವಿದ್ಯುತ್ ಸಂಪರ್ಕ ತಕ್ಷಣ ನೀಡಬೇಕು. ಕೆರೆ ತುಂಬುವ ಯೋಜನೆ ಮುಗಿದ ಕೂಡಲೇ ಇಲ್ಲಿಂದ ನೀರನ್ನು ಎತ್ತಿ ಕೆರೆಗಳಿಗೆ ಹರಿಸಲಾಗುವುದು ಎಂದು ತಿಳಿಸಿದರು.
ನೀರಾವರಿ ಅಧಿಕಾರಿಗಳಾದ ಇಇ ಎಸ್.ಎಸ್.ಕರಿಗಾರ, ಎಇಇ ಕಲ್ಮೇಶ ಕಮಲಾಕರ, ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಕಾಟೆ, ಅನೀಲ ಹಂಜೆ, ಮಹಾವೀರ ಪಾಟೀಲ, ದಶರಥ ಕಾಟೆ, ಅಜೀತ ಖೆಮಲಾಪೂರೆ, ಸತ್ಯಪ್ಪ ಬಿಷ್ಠೆ, ರಮಜಾನ ಮಕಂದಾರ, ಶ್ರೀಕಾಂತ ಮಂಗಸೂಳೆ, ಜಿನ್ನಪ್ಪ ಚಂಪು, ಅರುಣ ಶಿಂದೆ, ಶಾಮ ಕಾಂಬಳೆ, ದೇವಪ್ಪ ಗಾಂಜೆ ಸೇರಿ ಅನೇಕರು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 