ಜಿಲ್ಲೆಯಲ್ಲಿ ಸಲ್ಲಿಸಿದ ಸುದೀರ್ಘ ಸೇವೆ ತೃಪ್ತಿ ತಂದಿದೆ: ಬಿ.ವಿ.ತುಕಾರಾಂರಾವ್


ಲೋಕದರ್ಶನ ವರದಿ

ಕೊಪ್ಪಳ 12: ಕೊಪ್ಪಳ  ಜಿಲ್ಲೆಯಲ್ಲಿ  ಜಿಲ್ಲಾ ವಾತರ್ಾಧಿಕಾರಿಗಳಾಗಿ ಸಲ್ಲಿಸಿದ  17ವರ್ಷಗಳ ಸುದೀರ್ಘ ಸೇವೆ ತಮಗೆ ತೃಪ್ತಿ ತಂದಿದೆ ಎಂದು ವಾತರ್ಾಧಿಕಾರಿ ಬಿ.ವಿ.ತುಕಾರಾಂರಾವ್ ಅಭಿಪ್ರಾಯಪಟ್ಟರು.

ಅವರು ಸೋಮವಾರ ಜಿಲ್ಲಾಡಳಿತ ಭವನದ ವಾತರ್ಾ ಇಲಾಖೆಯಲ್ಲಿ ಜರುಗಿದ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದ್ದು, ತಾವು ಇಲ್ಲಿಂದ ವರ್ಗವಾಗಿ ಹೊರಟಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಮರೆಯಲಾಗದು ಎಂದ ಅವರು, ಜಿಲ್ಲೆಯ ಪತ್ರಕರ್ತರ ಸಹಕಾರದಿಂದ ತಾವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದರು.

ಅವರು ಮುಂದುವರೆದು ಮಾತನಾಡಿ, ಕೊಪ್ಪಳ ಜಿಲ್ಲೆ ಎಲ್ಲ ರಂಗಗಳಲ್ಲೂ ಮುಂದಿದೆ. ಪತ್ರಕರ್ತರು ಜಿಲ್ಲೆಯ ಪರಂಪರೆಯನ್ನು ರಾಜ್ಯ ಹಾಗೂ ದೇಶಕ್ಕೆ ಪರಿಚಯಿಸುವ ಕಾರ್ಯವನ್ನು ಮತ್ತಷ್ಟು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

     ವಾತರ್ಾಧಿಕಾರಿ ಬಿ.ವಿ.ತುಕಾರಾಂರವರಿಗೆ ಸುವರ್ಣ ಕನರ್ಾಟಕ ಪತ್ರಕರ್ತರ ಸಂಘ ಪದಾಧಿಕಾರಿಗಳಿಂದ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ನಿವೃತ್ತ ಜಿಲ್ಲಾ ವಾತರ್ಾಧಿಕಾರಿ ಬಸವರಾಜ ಆಕಳವಾಡಿ, ಅನಿತಾ ತುಕಾರಾಂರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಾಧಿಕ್ ಅಲಿ, ರಾಜ್ಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಮಹೇಶಬಾಬು ಸುವರ್ೆ ಉಪಸ್ಥಿತರಿದ್ದರು. ಸುವರ್ಣ ಕನರ್ಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ವೈ.ಬಿ.ಜೂಡಿ, ರಾಜ್ಯ ಪ್ರಧಾನ ಕಾರ್ಯದಶರ್ಿ ರಮೇಶ ಪವಾರ್, ಜಿಲ್ಲಾಧ್ಯಕ್ಷ ಪರಶುರಾಮ ಕಲ್ಗುಡಿ, ಪದಾಧಿಕಾರಿಗಳಾದ ವೆಂಕಟೇಶ ಮಾಂತಾ, ಮಲ್ಲಿಕಾಜರ್ುನ ನಾಯಕ, ಮಲ್ಲಿಕಾಜರ್ುನ ಹೊಸಕೇರಾ, ಕನರ್ಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಖಜಾಂಚಿ ಗಿರೀಶ್ ಕುಲಕಣರ್ಿ, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದಶರ್ಿಎನ್.ಎಂ.ದೊಡ್ಡಮನಿ, ಸುದಿನ ಪತ್ರಿಕೆ ಸ್ಥಾನಿಕ ಸಂಪಾದಕ ಎಚ್.ಎಸ್.ಹರೀಶ್, ಪತ್ರಕರ್ತರಾದ ರಾಜಸಾಬ್ ಮುಲ್ಲಾ, ವೀರಣ್ಣ ಕಳ್ಳಿಮನಿ, ರುದ್ರಗೌಡ ಪಾಟೀಲ್, ರವಿಚಂದ್ರ ಬಡಿಗೇರ, ರಾಘವೇಂದ್ರ ಅರಕೇರಿ, ರಾಕೇಶ ಕಾಂಬ್ಳೇಕರ್, ಖಾಸಿಂ ನದಾಫ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ, ವಾತರ್ಾ ಇಲಾಖೆಯ ಪ್ರದಸ ಎಂ.ಅವಿನಾಶ್, ಸಿಬ್ಬಂದಿಗಳಾದ ಎಂ. ಪಾಂಡುರಂಗ ತಿಪ್ಪಯ್ಯ ನಾಯ್ಡು, ಮುತ್ತು ಚಲವಾದಿ, ಆರೀಫ್ ಅಹ್ಮದ್, ಷಣ್ಮುಖ, ಶೇಖರಗೌಡ ಮತ್ತಿತರರು ಭಾಗವಹಿಸಿದ್ದರು. ಹಿರಿಯ ಪತ್ರಕರ್ತ ಜಿ.ಎಸ್. ಗೋನಾಳ ಕಾರ್ಯಕ್ರಮ ನಿರೂಪಿಸಿದರು.

 

ಇತ್ತೀಚಿನ ಸುದ್ದಿ