ಲಿಂಗರಾಜರ 158 ನೇ ಜಯಂತಿ
ಲೋಕದರ್ಶನ ವರದಿ
ಶಿರಸಂಗಿ 14: ಸ್ಥಳೀಯ ಲಿಂಗರಾಜರ 158 ನೇ ಜಯಂತಿಯನ್ನು ಗ್ರಾಮದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗರಾಜ ಸ್ಮಾರಕ ಶಿಕ್ಷಣ ಸಮಿತಿ, ಲಿಂಗರಾಜ ಉತ್ಸವ ಸಮಿತಿ ಸೇರಿದಂತೆ ಗ್ರಾಮಸ್ಥರ ಆಶ್ರಯದಲ್ಲಿ ಜರುಗಿದ ಜಯಂತಿಯಲ್ಲಿ ಲಿಂಗರಾಜ ಪ್ರೌಢ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯವರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲಿಂಗರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಲಿಂಗರಾಜ ಪ್ರೌಢಶಾಲೆಯಿಂದ ಕೋಟೆಯತನ ಲಿಂಗರಾಜರ ಭಾವಚಿತ್ರ ಮೆರವಣಿಗೆ ಜರುಗಿತು. ವಿಶ್ವಶಕ್ತಿ ಆದರ್ಶ ವಿದ್ಯಾಲಯದ ವಿದ್ಯಾಥರ್ಿನಿ ಕುಮಾರಿ ಲಕ್ಷ್ಮೀ ಸುಕಂದ ಲಿಂಗರಾಜರ ವೇಷ ಭೂಷಣಧರಿಸಿ ಜಯಂತಿಗೆ ಮೆರಗುತಂದಳು. ಶಿವಾಜಿ ಶಿಂಧೆ, ಮಾಬುಸುಭಾನಿ ಯಲಿಗಾರ, ಎಸ್.ಎಮ್. ಪಾಟೀಲ, ವಿ.ವಿ. ವೀರನಗೌಡ್ರ, ಕೆ.ಐ. ಕಲಾಲ, ಜಿ.ಟಿ. ಧಡೆಮ್ಮ,ನವರ, ಮಲ್ಲಿಕಾಜರ್ುನ ತೊರಣಗಟ್ಟಿ, ಪ್ರಭು ಅಣ್ಣಿಗೇರಿ, ಎಸ್.ಎಸ್. ಗುಳ್ಳ, ಎಮ್.ಎಸ್. ತೊರಗಲ್, ಕಾಂತೇಶ ಪಟ್ಟೇದ, ಬಿ.ಪಿ. ಗಾಣಗೇರ ಸೇರಿದಂತೆ ಮತ್ತಿತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 