ಜೀವನ ಈಶ್ವರ ಪ್ರಾಪ್ತಿಗಾಗಿ ಕೂಡ ಮೀಸಲಾಗಿರಲಿ: ಶ್ರೀಗಳು
Life should also be dedicated to attaining God: Sri
ಜೀವನ ಈಶ್ವರ ಪ್ರಾಪ್ತಿಗಾಗಿ ಕೂಡ ಮೀಸಲಾಗಿರಲಿ: ಶ್ರೀಗಳು
ರಾಯಬಾಗ 13: ಜೀವನವೆಂಬುದು ಕೇವಲ ಸಾಂಸಾರಿಕ ಸುಖಕ್ಕಾಗಿ ಮೀಸಲಾಗದೆ, ಅದು ಈಶ್ವರ ಪ್ರಾಪ್ತಿಗಾಗಿ ಕೂಡ ಮೀಸಲಾಗಿರಬೇಕು ಎಂದು ಅಮೃತಾಶ್ರಮ ಸ್ವಾಮಿ ಮಹಾರಾಜರು ಹೇಳಿದರು.
ಶನಿವಾರ ಪಟ್ಟಣದ ವಿಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದ 105ನೇ ಜ್ಞಾನೇಶ್ವರಿ ನಾಮೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂತ ಜ್ಞಾನೇಶ್ವರ, ಸಂತ ತುಕಾರಾಮ ಹಾಗೂ ಸಂತ ಏಕನಾಥರ ಜೀವನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ. ಇಂದಿನ ಕಾಲದಲ್ಲಿ ಮನುಷ್ಯನು ಹಣ, ಸ್ಥಾನಮಾನ ಹಾಗೂ ಖ್ಯಾತಿ ಗಳಿಸಿದರೂ, ಇತರರ ಸೇವೆಗೆ ಮುಂದೆ ಬರದಿದ್ದರೆ ಅವನ ಜೀವನ ಅಪೂರ್ಣ ಎಂದು ಹೇಳಿದರು.
ಸಮಾರಂಭದ ಅಂತ್ಯದಲ್ಲಿ ಸಾಮೂಹಿಕ ಆರತಿ ನೆರವೇರಿಸಲಾಯಿತು. ನಂತರ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಜ್ಞಾನೇಶ್ವರಿ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 